​”ಯಾರಪ್ಪನ ಮನೆ ಹಣದಲ್ಲಿ ಗ್ಯಾರಂಟಿ ಕೊಡ್ತಿದ್ದೀರಿ?”: ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾರಪ್ಪನ ಮನೆಯಿಂದ ಹಣ ತಂದು ಗ್ಯಾರಂಟಿ ಕೊಡ್ತಾ ಇದ್ದಾರೆ?” ಎಂದು ಖಾರವಾಗಿ ಪ್ರಶ್ನಿಸಿದರು.​

​ತೆರಿಗೆಯ ಹಣವೇ ಗ್ಯಾರಂಟಿ: ಜನರ ಮೇಲೆ ಪದೇ ಪದೇ ತೆರಿಗೆ ಹೇರಿಕೆ ಮಾಡುವ ಮೂಲಕ ಸಂಗ್ರಹಿಸಿದ ಹಣದಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಹೊರತು ಬೇರೆಲ್ಲಿಂದಲೂ ಅಲ್ಲ ಎಂದು ಅವರು ಟೀಕಿಸಿದರು.
​ಅಭಿವೃದ್ಧಿ ಕುಂಠಿತ: ಸರ್ಕಾರದ ಬಳಿ ಗ್ಯಾರಂಟಿ ಕೊಡಲು ಹಣವಿದೆಯೇ ಹೊರತು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ. ಈ ಸರ್ಕಾರಕ್ಕೆ ಅಭಿವೃದ್ಧಿಪದದ ಅರ್ಥವೇ ಗೊತ್ತಿಲ್ಲ ಎಂದು ಕಿಡಿಕಾರಿದರು.

- Advertisement - 

​ಸಾಲ ಮನ್ನಾ ಉದಾಹರಣೆ: “ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ, ಆದರೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಯಾವತ್ತೂ ಹೇಳಿರಲಿಲ್ಲ” ಎಂದು ತಮ್ಮ ಆಡಳಿತವನ್ನು ನೆನಪಿಸಿಕೊಂಡರು.

​ರಾಜ್ಯದ ಆರ್ಥಿಕ ಸ್ಥಿತಿ: ರಾಜ್ಯವು ತಲಾ ಆದಾಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ರಾಜ್ಯ ಅಷ್ಟು ಶ್ರೀಮಂತವಾಗಿದ್ದರೆ ಮತ್ತು ಜನರು ಆರ್ಥಿಕವಾಗಿ ಸಬಲರಾಗಿದ್ದರೆ ಈ ಗ್ಯಾರಂಟಿಗಳ ಅಗತ್ಯವೇನಿತ್ತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

- Advertisement - 

​ಚುನಾವಣಾ ಅಕ್ರಮದ ಆರೋಪ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಲ್ಲಿ ಹಣದ ಹೊಳೆ ಹರಿಯುತ್ತಿದೆ. ಜನರು ಸರ್ಕಾರದ ಕೆಲಸ ನೋಡಿ ವೋಟ್ ಹಾಕಬೇಕೋ ಅಥವಾ ಇವರು ಹರಿಸುತ್ತಿರುವ ಹಣದ ಹೊಳೆ ನೋಡಿ ವೋಟ್ ಹಾಕಬೇಕೋ ಎಂದು ಗೇಲಿ ಮಾಡಿದರು.

​ದಾವಣಗೆರೆ ದಕ್ಷಿಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಪ್ರಚಾರ ನಡೆಸಲು ಆಗಮಿಸಿದ್ದ ವೇಳೆ ಕುಮಾರಸ್ವಾಮಿ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.

 

Share This Article
error: Content is protected !!
";