ಮಾಸ್ಟರ್‌ ಮೈಂಡ್ ಮಹೀಂದ್ರ ಕುಮಾರ್ ಸೇರಿ ಮೂವರ ಬಂಧನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಎನ್‌ಸಿಬಿ ನಡೆಸಿದ ಶೋಧದಲ್ಲಿ ಮಾದಕ ವಸ್ತುಗಳ ತಯಾರಿಕೆಗೆ ಅತ್ಯಾಧುನಿಕ ಉಪಕರಣಗಳನ್ನು ಹೊಂದಿದ್ದ ಪೂರ್ಣ ಪ್ರಮಾಣದ ರಹಸ್ಯ ಲ್ಯಾಬ್​ ಪತ್ತೆಯಾಗಿದೆ ಎಂದು ಎನ್​​ಸಿಬಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶುಚಿಗೊಳಿಸುವ ಉದ್ದೇಶಗಳಿಗಾಗಿ ರಾಸಾಯನಿಕಗಳನ್ನು ತಯಾರಿಸುವ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಘಟಕವನ್ನು ಆರೋಪಿ ಮತ್ತು ಮಾಸ್ಟರ್‌ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಅವರ ಸಂಬಂಧಿ ಬಾಡಿಗೆಗೆ ಪಡೆದಿದ್ದು ಆತನನ್ನು ಬಂಧಿಸಲಾಗಿದೆ. ರಹಸ್ಯ ಲ್ಯಾಬ್​ಅನ್ನು ವಿಧಿವಿಜ್ಞಾನ ತಂಡವು ಪರೀಕ್ಷೆಗಾಗಿ ಸೀಜ್​ ಮಾಡಿದೆ ಎಂದು ಎನ್​ಸಿಬಿ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

- Advertisement - 

ಗುಪ್ತಚರ ಮಾಹಿತಿಯ ಆಧಾರದ ಮೇಲೆ 28.01.2026 ರಂದು ಗುಜರಾತ್‌ನ ಸೂರತ್ ಜಿಲ್ಲೆಯ ಪಲ್ಸಾನಾದಲ್ಲಿ ಕರ್ನಾಟಕ ನೋಂದಣಿ ಸಂಖ್ಯೆಯ ಟೊಯೋಟಾ ಫಾರ್ಚೂನರ್ ಎಸ್‌ಯುವಿಯನ್ನು ಎನ್‌ಸಿಬಿ ಅಧಿಕಾರಿಗಳು ತಡೆಹಿಡಿದು, ಪರಿಶೀಲನೆ ನಡೆಸಿದಾಗ ಸುಮಾರು 35 ಕೆ.ಜಿ ಮೆಫೆಡ್ರೋನ್ (MD) ಪತ್ತೆಯಾಗಿದೆ. ಇದಲ್ಲದೆ, ಪಲ್ಸಾನಾದ ದಾಸ್ತಾನ್ ರೆಸಿಡೆನ್ಸಿಯಲ್ಲಿರುವ ಮಾದಕವಸ್ತು ಜಾಲದ ಮಾಸ್ಟರ್‌ ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಅವರ ಮನೆಯಲ್ಲಿ ನಡೆಸಿದ ಶೋಧದಲ್ಲಿ 1.8 ಕೆಜಿ ಅಫೀಮು, 25.6 ಲಕ್ಷ ರೂ. ನಗದು ಮತ್ತು ವಿವಿಧ ರಾಸಾಯನಿಕಗಳು ಪತ್ತೆಯಾಗಿವೆ. ಸೂರತ್ ಪೊಲೀಸರ ಸಹಾಯದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್​ಸಿಬಿ ತಿಳಿಸಿದೆ.

ಮೂವರ ಬಂಧನ:
ರಾಜಸ್ಥಾನದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಮಾಸ್ಟರ್‌ಮೈಂಡ್ ಮಹೀಂದ್ರ ಕುಮಾರ್ ವಿಷ್ಣೋಯ್ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಎನ್​​ಸಿಬಿ ತಿಳಿಸಿದೆ.

- Advertisement - 

ಈ ಹಿಂದೆ ಅಫೀಮು ಮತ್ತು ಸ್ಮ್ಯಾಕ್ ಮಾರಾಟದಲ್ಲಿ ಭಾಗಿಯಾಗಿದ್ದ ಮಹೀಂದ್ರ ಕುಮಾರ್ ವಿಷ್ಣೋಯ್, ಎನ್‌ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಇತರ ಕೈದಿಗಳೊಂದಿಗೆ ಮಾತನಾಡುವಾಗ ಸಿಂಥೆಟಿಕ್ ಡ್ರಗ್ಸ್ ತಯಾರಿಸುವ ಬಗ್ಗೆ ತಿಳಿದುಕೊಂಡಿರುವುದು ಎಂದು ತನಿಖೆಯಿಂದ ಗೊತ್ತಾಗಿದೆ.

ಜೈಲು ವಾಸದ ವೇಳೆ ಅವರು ಸಂಶ್ಲೇಷಿತ ಮಾದಕ ದ್ರವ್ಯಗಳ ಪ್ರಕ್ರಿಯೆಗಳು, ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆ ಸರಪಳಿಗಳೊಂದಿಗೆ ಪರಿಚಿತರಾದರು, ನಂತರ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ನಂತರ ಮೈಸೂರಿನಲ್ಲಿ ರಹಸ್ಯ ಉತ್ಪಾದನಾ ಘಟಕವನ್ನು ಸ್ಥಾಪಿಸಿ ತಯಾರಿಕೆ ಮಾಡುತ್ತಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ರಾಜ್ಯಪೊಲೀಸರ ವಿಫಲ-
ಮೈಸೂರಿನಲ್ಲಿ ಎನ್​ಸಿಬಿ ದಾಳಿ ಮಾಡಿ 10 ಕೋಟಿ ಮೌಲ್ಯದ ಡ್ರಗ್ಸ್ ತಯಾರಿಕಾ ಕಚ್ಚಾ ಸಾಮಗ್ರಿಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಎನ್​​ಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಈ ವಿಚಾರಕ್ಕೆ ಎನ್​​ಸಿಬಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ವಿಚಾರದಲ್ಲಿ ಕರ್ನಾಟಕ ಪೊಲೀಸರು ವಿಫಲರಾಗಿದ್ದು
, ಈ ವಿಚಾರದಲ್ಲಿ ಮೈಸೂರು ಪೊಲೀಸ್​​ ಕಮಿಷನರ್ ಹಾಗೂ ಗೃಹ ಸಚಿವರು ಅಲ್ಲಿ ಏನು ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದರು.

ಆದರೆ ಎನ್​​ಸಿಬಿಯ ಪತ್ರಿಕಾ ಪ್ರಕಟಣೆಯಲ್ಲಿ 10 ಕೋಟಿ ಮೌಲ್ಯದ ಡ್ರಗ್ಸ್ ತಯಾರಿ ಮಾಡುವ ಕಚ್ಚಾ ವಸ್ತು ಸಿಕ್ಕಿದೆ ಎಂದು ತಿಳಿಸಿದೆ. ಇದು ನಮ್ಮ ಪೊಲೀಸ್ ವ್ಯವಸ್ಥೆಯ ವೈಫಲ್ಯ ಎಂದು ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ಡ್ರಗ್ಸ್ ಪ್ರಕರಣಗಳ ಪತ್ತೆಗಾಗಿ ವಿಶೇಷ ತಂಡ ರಚಿಸಬೇಕು ಹಾಗೂ ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶ ಕೊಡಬೇಕು. ಮೈಸೂರಿನಲ್ಲಿ ಡ್ರಗ್ಸ್​​​​ ತಯಾರಿಕಾ ಜಾಲ ಪದೇ ಪದೇ ಪತ್ತೆಯಾಗುತ್ತಿರುವುದು, ಮೈಸೂರಿನ ಹೆಸರನ್ನ ರಾಷ್ಟ್ರ ಮಟ್ಟದಲ್ಲಿ ಹಾಳು ಮಾಡುತ್ತಿದೆ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ರಾಜ್ಯದ ಕಾನೂನು ಸುವ್ಯವಸ್ಥೆ ಸರಿಪಡಿಸಬೇಕೆಂದು ಆಗ್ರಹಿಸಿದರು.

Share This Article
error: Content is protected !!
";