ಹಿಂದುಳಿದ ವರ್ಗದ ನೇತಾರ ಬಂಗಾರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀ ಎಸ್ ಬಂಗಾರಪ್ಪನವರು ಮಾಜಿ ಮುಖ್ಯಮಂತ್ರಿಗಳು ಇವರ ಜನ್ಮದಿನಾಚರಣೆ ಈ ದಿನದಂದು ಅವರ ಆಡಳಿತಾತ್ಮಕ ವಿಚಾರಗಳನ್ನು ನೆನೆದು ಗೌರವದ ನಮನಗಳನ್ನು ಅರ್ಪಿಸುತ್ತೇನೆ.

- Advertisement - 

ಬಂಗಾರಪ್ಪನವರು ಹಿಂದುಳಿದ ವರ್ಗಗಳ ನೇತಾರ. ನಾಡಿನ ನೆಲ ಜಲದ ಬಗೆಗೆ ಅಪರಿಮಿತ ಕಾಳಜಿ ಹೊಂದಿದ್ದ ಸಮಾಜವಾದಿ ಚಿಂತಕರು. ನನ್ನ ನೆಚ್ಚಿನ ನಾಯಕರು, ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದ್ದರು.

- Advertisement - 

ಇದೆ ಸಮಯಕ್ಕೆ ರಾಜ್ಯದಲ್ಲಿ ಮಳೆ ಅಭಾವದಿಂದ ಕನ್ನಂಬಾಡಿ ಅಣೆಕಟ್ಟೆಗೆ ನೀರು ಹೆಚ್ಚಾಗಿ ಬಂದಿರುವುದಿಲ್ಲ. ಈ ವಿಚಾರವನ್ನು ಗಮನಿಸಿದ ಸುಪ್ರೀಂಕೋರ್ಟ್ ತಮಿಳುನಾಡಿನ ಕೃಷಿ ಕಾಯಕಕ್ಕೆ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಿಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಕೋರ್ಟ್ ಆದೇಶಿಸುತ್ತದೆ.

ಈ ವಿಚಾರವನ್ನು ಖಂಡಿಸಿದ ಮುಖ್ಯಮಂತ್ರಿ  ಬಂಗಾರಪ್ಪನವರು ರಾಜ್ಯದ ಹಿತಾಸಕ್ತಿಯ ಪರವಾಗಿ ನಿಂತರು. ಸುಪ್ರೀಂಕೋರ್ಟಿನ  ಅಧಿಸೂಚನೆಯನ್ನು ಧಿಕ್ಕರಿಸಿದರು.

- Advertisement - 

ತಮಿಳುನಾಡಿಗೆ ನೀರು ಬಿಡದೆ ಕಾವೇರಿ ಕಣಿವೆಯ ರೈತರ ಬದುಕಿಗಾಗಿ ಪಣತೊಟ್ಟರು. ಬಂಗಾರಪ್ಪನವರ ಆಡಳಿತಾತ್ಮಕ ಸ್ಥೈರ್ಯವನ್ನು ನಾಡಿನ ಜನತೆ ಮೆಚ್ಚಿಕೊಂಡರು.

ಆ ದಿನಗಳಲ್ಲಿ ಈ ಸುದ್ದಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಿತ್ತು ಹಾಗೂ ಇತಿಹಾಸ ಪುಟಗಳಲ್ಲಿಯು ದಾಖಲಾಯಿತು. ಬಂಗಾರಪ್ಪನವರ ಧೀಮಂತಿಕೆ ಗುಣಗಳು ನನ್ನಂತ ಅನೇಕ ಮೌಲ್ಯಾಧಾರಿತ ರಾಜಕಾರಣಿಗಳಿಗೆ ಸ್ಫೂರ್ತಿದಾಯಕ.
2004 ರಲ್ಲಿ ಬಂಗಾರಪ್ಪನವರು ಕಾಂಗ್ರೆಸ್ ಪಕ್ಷದಿಂದ ಸಿಡಿದೆದ್ದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಆ ಸಂದರ್ಭದಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಹಾಗೂ ವಿಧಾನ ಸಭೆಯಲ್ಲಿ ಚುನಾವಣೆಗೆ ಬಂಗಾರಪ್ಪನವರು ಶಿವಮೊಗ್ಗ ಲೋಕಸಭಾ ಸಂಸದರಾಗಿ ಆಯ್ಕೆಯಾದರು. ರಾಜ್ಯ ವಿಧಾನಸಭೆಗೆ ಬಿಜೆಪಿ ಪಕ್ಷದಿಂದ 77 ಶಾಸಕರು ಆಯ್ಕೆಯಾಗಲು ಬಂಗಾರಪ್ಪನವರ ನಾಯಕತ್ವ ಕಾರಣವಾಯಿತು. ಈ ಹಿನ್ನೆಲೆಯಲ್ಲಿಯೇ 2006ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಆಡಳಿತ ನೀಡಿದ್ದಾರೆ.

2007-08 ರ ಸಮಯದಲ್ಲಿ ಕೆಲವು ಕಾರಣಕ್ಕೆ ಬಿಜೆಪಿ ಪಕ್ಷದ ವಿರುದ್ಧ ಬೇಸತ್ತ ಬಂಗಾರಪ್ಪನವರು ಲೋಕಸಭಾ ಸಂಸದ್ದ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು. ಬಂಗಾರಪ್ಪನವರು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರ್ಪಡೆಗೆ ಶಿವಮೊಗ್ಗ ನಗರದಲ್ಲಿ ದೊಡ್ಡ ಪ್ರಮಾಣದ ಬಹಿರಂಗ ಸಮಾವೇಶದ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಈ ಕಾರ್ಯಕ್ರಮದ ಯಶಸ್ಸು ಗೊಳಿಸುವ ಕಾರಣಕ್ಕೆ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮಂಜುನಾಥ್ ಅವರನ್ನು ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಎಂ.ಅಜ್ಜಪ್ಪ ಹಾಗೂ ನನ್ನನು ತೀರ್ಥಹಳ್ಳಿ ವಿಧಾನ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಕೆಪಿಸಿಸಿ ನೇಮಕ ಮಾಡಿದ್ದು ಈ ವಿಚಾರದಲ್ಲಿ ಎರಡು ಮೂರು ಬಾರಿ ತೀತ್ತರ್ಳಿಗೆ ನಾವುಗಳು ಬೇಟಿ ನೀಡಿ ಪಕ್ಷದ ಸಂಘಟನೆ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆ ನಮ್ಮದು ಒಂದು ಸಣ್ಣ ಪಾತ್ರವಿದ್ದಿದು ಈ ಸಮಯದಲ್ಲಿ ನೆನೆಯುತ್ತೇನೆ. ಇದು ಕಥೆಯಲ್ಲ ರಾಜ್ಯ ರಾಜಕಾರಣದ ಇತಿಹಾಸ.
ಲೇಖನ-ರಘು ಗೌಡ, 9916101265

 

 

 

Share This Article
error: Content is protected !!
";