ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು ಅಭಿನಂದನೆಗೆ ಅರ್ಹವಾಗಿದೆ ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರು, ಬಿಬಿಎಂಸಿ ಡೆಪ್ಯೂಟಿ ಕಮಿಷನ್ ಜೆ.ರಾಜು ಬೇತೂರು ಪಾಳ್ಯ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ವಾಸಿಸುತ್ತಿರುವ ಕೃಷಿಕ ಕುಟುಂಬದ ಮಕ್ಕಳು ಹತ್ತನೇ ತರಗತಿಯಲ್ಲಿ ಹೆಚ್ಚಿಗೆ ಅಂಕಗಳನ್ನು ಪಡೆದಿರುವ ಟಾಪ್ 10 ಮಕ್ಕಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಜೆ. ರಾಜು ಬೇತೂರು ಪಾಳ್ಯ ಇವರು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದಂತಹ ಕೃಷಿ ಕುಟುಂಬದ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅವರ ಪೋಷಕರು ಮತ್ತು ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪುರಸ್ಕರಿಸುವ ಮೂಲಕ ಮಹತ್ವದ ಸಾಮಾಜಿಕ ಕಾರ್ಯವನ್ನು ರಾಜು ಮಾಡಿದರು.
ಕಳೆದ ವರ್ಷ ಹಿರಿಯೂರು ತಾಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯೂರು ತಾಲೂಕಿನ ಮಕ್ಕಳನ್ನು ಸನ್ಮಾನಿಸಿದ್ದನ್ನು ಸ್ಮರಿಸಬಹುದಾಗಿದೆ.
ಕುಂಚಿಟಿಗ ಸಮಾಜ ಹಿರಿಯ ಮುಖಂಡ ಕೆ ಟಿ ರುದ್ರಮುನಿ, ಉಪನ್ಯಾಸಕ ಡಿ.ನರಸಿಂಹಪ್ಪ, ಉಪನ್ಯಾಸಕ ಚಿಗಳಿಕಟ್ಟೆ ಕಾಂತರಾಜ್ ಸೇರಿದಂತೆ ಮತ್ತಿತರ ಮುಖಂಡರು, ಮತ್ತು ಸಾಧನೆಗೈದ ಮಕ್ಕಳ ಪೋಷಕರು ಇದ್ದರು.