ಮಣ್ಣಿನ ಮಡಿಲಲ್ಲಿ ಜೀವರಾಶಿಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
 ವಿಶ್ವ ಮಣ್ಣಿನ ದಿನವಾದ ಇಂದು ಮಣ್ಣಿನ ಮಹತ್ವದ ವಿಚಾರಗಳನ್ನು ನೆನೆದು ಭಕ್ತಿಯಿಂದ ನಮಿಸೋಣ. ಜೀವಕೋಶಕ್ಕೆ ಬೇಕಾದ ಎಲ್ಲಾ ಗುಣಾತ್ಮಕ ವಿಚಾರಗಳನ್ನು ಮಣ್ಣಿನಲ್ಲಿ ಭಗವಂತ ತುಂಬಿದ್ದಾನೆ.

ಮಣ್ಣು ನೈಸರ್ಗಿಕ ಸಂಪನ್ಮೂಲವಾಗಿದ್ದೆ. ಕೃಷಿ ಕಾಯಕದ ಸಸ್ಯರಾಶಿಗಳ ಆಹಾರ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳು ಮಣ್ಣಿನಲ್ಲಿ ಸಿಗುತ್ತದೆ.

- Advertisement - 

ಎಂತಹದೇ ಕಲುಷಿತ ನೀರಿದ್ದರು ಮಣ್ಣಿನ ಗುಣಾತ್ಮಕ ಪದರಗಳು ನೀರನ್ನು ಶುದ್ದಿ ಮಾಡುತ್ತದೆ. ಭೂಗರ್ಭದಲ್ಲಿ ಉತ್ಪನ್ನವಾಗುವ ತಾಪಮಾನದ ಹೆಚ್ಚಳವನ್ನು ಅನಿಲದ ಮೂಲಕ ಹೊರಸೂಸುತ್ತದೆ.

 ಮಣ್ಣು ಹಾಗೂ ನೀರು ನೈಸರ್ಗಿಕ ವಸ್ತುಗಳು. ಪರಿಸರ ವ್ಯವಸ್ಥೆ ಮಾನವರ  ಯೋಗಕ್ಷೇಮವನ್ನು ಕಾಪಾಡುತ್ತದೆ. ಈ ವಿಚಾರವನ್ನು ಗಮನಿಸಿದ ಪ್ರತಿಯೋರ್ವ ಆತ್ಮೀಯರು ಈ ಸುದ್ದಿಯನ್ನು ಇತರರಿಗೆ ಪರಿಚಯಿಸಿ. ಇದು ಕಥೆಯಲ್ಲ ನೈಸರ್ಗಿಕ ಸಂಪನ್ಮೂಲಗಳ ಕೊಡುಗೆ.
ಲೇಖನ-ರಘು ಗೌಡ 9916101265

- Advertisement - 

Share This Article
error: Content is protected !!
";