ಬಿಜೆಪಿಯ ದ್ವೇಷದ ರಾಜಕೀಯ ಮೌಂಟ್ ಎವೆರೆಸ್ಟ್ ಎತ್ತರಕ್ಕೆ ಏರಿದೆ-ಕಾಂಗ್ರೆಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ ದ್ವೇಷದ ರಾಜಕೀಯ ಮೌಂಟ್ ಎವೆರೆಸ್ಟ್ ಎತ್ತರಕ್ಕೆ ಏರಿದೆ ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಆರೋಪಿಸಿದೆ.

- Advertisement - 

ರಾಜ್ಯಪಾಲರನ್ನು ಮುಂದೆ ಬಿಟ್ಟಾಯ್ತು, ಸಿಬಿಐಗೆ ಅವಕಾಶ ಇಲ್ಲದಾಯ್ತು, ಈಗ ED ಮುಂದೆ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement - 

 ಮುಡಾ ಪ್ರಕರಣದಲ್ಲಿ ಅಕ್ರಮ ಹಣದ ಪ್ರಕರಣಗಳನ್ನು ತನಿಖೆ ಮಾಡುವ EDಗೇನು ಕೆಲಸ? ಮುಡಾ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿಲ್ಲ,

ನಿವೇಶನಗಳನ್ನು ಖರೀದಿ ಮಾಡಿದ್ದಲ್ಲ, ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ, ಹೀಗಿರುವಾಗ ED ಏಡಿ ಹಿಡಿಯಲು ಬರುತ್ತದೆಯೇ!? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement - 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಮೇಜ್ ನ್ನು ಘಾಸಿಗೊಳಿಸುವ ಹಾಗೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Share This Article
error: Content is protected !!
";