ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ದವಳಗಿರಿ ಬಡಾವಣೆಯ ಶಶಿರೇಖಾ ಮತ್ತು ರವಿಶಂಕರ್ ದಂಪತಿಯ ಪುತ್ರಿ ಸಿ.ಆರ್.ಪದ್ಮಶ್ರೀ ಅವರಿಗೆ ಮೈಸೂರು ವಿಶ್ವ ವಿದ್ಯಾಲಯದಿಂದ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪಿ.ಹೆಚ್ಡಿ ಪದವಿಗೆ ಭಾಜನರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಡಾ.ಹರಿಹರನ್ ರವಿ ಅವರ ಮಾರ್ಗದರ್ಶನದಲ್ಲಿ ಪದ್ಮಶ್ರೀ ಅವರು ಮಂಡಿಸಿದ “ಪೈನಾನ್ಸಿಯಲ್ ಎಂಪವರ್ಮೆಂಟ್ ಆಫ್ ವುಮೆನ್ ಎಂಟರ್ಪ್ರೆನರ್ ಥ್ರೂ ಎಂಎಸ್ಎಂಇ ಇನ್ ಬೆಂಗಳೂರು ಡಿಸ್ಟಿಕ್ಸ್-ಎ ಸ್ಟಡಿ” ಎನ್ನುವ ಸಂಶೋಧನೆ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ಲಭಿಸಿದೆ.

