ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಕರ್ನಾಟಕದ ಎಲ್ಲ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅವರ ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಸಾಧನೆಯ ಮನೋಭಾವ ಇಂದು ಈ ಯಶಸ್ಸಿನ ಶಿಖರ ತಲುಪುವಂತೆ ಮಾಡಿದೆ. ಸಾರ್ವಜನಿಕ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮರ್ಪಿಸಿ, ಜನಸೇವೆಯಲ್ಲಿ ಉತ್ತಮ ಆದರ್ಶವನ್ನು ಸ್ಥಾಪಿಸಲಿ.
ಇವರ ಮುಂದಿನ ಪಯಣದಲ್ಲಿ ಇನ್ನಷ್ಟು ಸಾಧನೆಗಳೊಂದಿಗೆ ದೇಶಕ್ಕೂ, ನಾಡಿಗೂ ಕೀರ್ತಿ ತರಲಿ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹಾರೈಸಿದ್ದಾರೆ.

