ನರೇಗಾ ಸ್ಥಳದಲ್ಲಿ ಸಂಭ್ರಮದ ಕಾರ್ಮಿಕರ ದಿನಾಚರಣೆ

News Desk

ಚಂದ್ರವಳ್ಳಿ ನ್ಯೂಸ್,  ಕೂಡ್ಲಿಗಿ :
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮದ ಹಳೆ ಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ಕಾರ್ಮಿಕರಿಂದ ಕಾರ್ಮಿಕರ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಕೇಕ್ ಕತ್ತರಿಸಿ ನರೇಗಾ ಸ್ಥಳದಲ್ಲಿ ಉಪಹಾರ ಸೇವಿಸುವ ಮೂಲಕ ಆಚರಿಸಲಾಯಿತು.

ನಂತರ ತಾಪಂ ಮಾಜಿ ಸದಸ್ಯ ಶೃತಿ ಎ ವೆಂಕಟೇಶ್ ಮಾತನಾಡಿ ಕಾರ್ಮಿಕರು ಗುಳೆ ಹೋಗಬಾರದೆಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ 370 ರೂ.ಗಳು ದಿನಗೂಲಿ ಇದ್ದು ಈ ಯೋಜನೆಯನ್ನು ಎಲ್ಲಾ ಕಾರ್ಮಿಕರು ಪಡೆದುಕೊಂಡು ಗುಳೆ ಹೋಗುವುದನ್ನು ನಿಲ್ಲಿಸಿ ಎಂದರು.

 ತಾಪಂ ಮಾಜಿ ಸದಸ್ಯ ನೇತ್ರಮ್ಮ ಜಿ ಓಬಣ್ಣ, ನರೇಗಾ ಮೇಟಿಗಳಾದ ಈ ಶರಣೇಶ, ಎ.ರಾಜಣ್ಣ, ಜಿ ಎಸ್ ರವಿಕುಮಾರ್, ಟಿ ಡಿ ಮಾಪಣ್ಣ, ತಿಪ್ಪೇಸ್ವಾಮಿ,  ಗ್ರಾಮದ ಮುಖಂಡರುಗಳಾದ ಸಣ್ಣ ಲೋಕಣ್ಣ, ಮುದ್ರೆನರ್ ನಾಗರಾಜ್,  ಮಂಜುನಾಥ್, ಪಿ ಬೋರಸ್ವಾಮಿ, ಎನ್ ಬೋರಿಸ್ವಾಮಿ ಭೋವಿ, ಬೋರಣ್ಣ, ಅಜ್ಜಯ್ಯ, ಟಿಡಿ ಪಾಪಣ್ಣ, ಗೊಂಚಿಗೆರ್ ಸಣ್ಣ ಬೋರಯ್ಯ, ಸುರೇಶ, ಚಂದ್ರಪ್ಪ ಸೇರಿದಂತೆ ಇತರೆ ಕಾರ್ಮಿಕರು ಇದ್ದರು ಎಂದು ಸಿ ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

 

Share This Article
error: Content is protected !!
";