ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸ್ಮಾರ್ಟ್ ಮೀಟರ್ಗಳಿಗೆ ಕೇಂದ್ರ ಸರ್ಕಾರ ಸಹಾಯಧನ ಕೊಡದೆ ವಂಚಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಎಂದಿನಂತೆ ಅನ್ಯರಾಜ್ಯಗಳಿಗೆ ರೂ. 900 ಸಹಾಯಧನ ನೀಡಿ ರಾಜ್ಯವನ್ನು ಕಡೆಗಣಿಸಿ ತಾರತಮ್ಯ ಎಸಗಿದೆ ಮೋದಿ ಸರ್ಕಾರ ಎಂದು ಕಾಂಗ್ರೆಸ್ ಹರಿಹಾಯ್ದಿದೆ.
ಕೈಲಾಗದ, ಧ್ವನಿ ಕಳೆದುಕೊಂಡ ರಾಜ್ಯ ಬಿಜೆಪಿ ಸಂಸದರು, ಕೇಂದ್ರಮಂತ್ರಿಗಳ ವೈಫಲ್ಯ ರಾಜ್ಯಕ್ಕೆ ಎಲ್ಲಾ ವಿಚಾರದಲ್ಲೂ ಕೇಂದ್ರದಿಂದ ನಿರಂತರ ಅನ್ಯಾಯವಾಗುವಂತೆ ಮಾಡಿದೆ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.