ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಹೆಚ್.ಆರ್. ಸಣ್ಣರಂಗಮ್ಮ (70) ವಯೋಸಹಜ ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ಆಕೆಯ ತವರೂರು ಹುಚ್ಚವ್ವನಹಳ್ಳಿಯಲ್ಲಿ ನಿಧನರಾದರು.
ಮೃತರು ಕೃಷಿಕ ಲೇಟ್ ಲಕ್ಷ್ಮಣಪ್ಪನವರ ಪತ್ನಿ. ಚಂದ್ರವಳ್ಳಿ ಪ್ರಾದೇಶಿಕ ದಿನ ಪತ್ರಿಕೆಯ ಹಿರಿಯೂರು ತಾಲೂಕು ವರದಿಗಾರ ಹಾಗೂ ವಂದೇಮಾತರಂ ರಾಜ್ಯ ಸಂಘಟನೆಯ ತಾಲೂಕು ಅಧ್ಯಕ್ಷ ಎಂ.ಎಲ್. ಗಿರಿಧರ
ಸೇರಿದಂತೆ ನಾಲ್ವರು ಗಂಡು ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಅದೇ ದಿನ ಮಲ್ಲಪ್ಪನಹಳ್ಳಿಯಲ್ಲಿ ನಡೆಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.

