ಮುಖ್ಯ ಇಂಜಿನಿಯರ್ ಕೆ.ಜಿ.ಜಗದೀಶ್ ಅವರ ಅಮಾನತು ಆದೇಶ ರದ್ದು, ಮತ್ತೆ ಅದೇ ಹುದ್ದೆ ನೀಡಿದ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್ ಅವರು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಸಲ್ಲಿಸಿದ್ದ ಅರ್ಜಿ ಸಂಖ್ಯೆ: 4848/2024ರಲ್ಲಿ ದಿನಾಂಕ: 11.03.2025ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯ,

ಬೆಂಗಳೂರು ಇಲ್ಲಿ ಸಲ್ಲಿಸಲಾಗಿದ್ದ 063 F ಸಂಖ್ಯೆ:8487/2025ರಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:24.04.2025 ರಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಹಾಗೂ ಇವರ ಅಮಾನತ್ತಿನ ಅವಧಿ 6 ತಿಂಗಳು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್ ಇವರ ಅಮಾನತ್ತನ್ನು ತೆರವುಗೊಳಿಸಿ

ಸೇವೆಗೆ ಪುನ‌ರ್ ಸ್ಥಾಪಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿಗಳು, ಬೆಂಗಳೂರು ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೇಮಲತ. ಜಿ ಅವರು ಮುಖ್ಯ ಇಂಜಿನಿಯರ್ ಕೆ.ಜಿ. ಜಗದೀಶ್ ಕುರಿತು ಆದೇಶ ಮಾಡಿದ್ದಾರೆ.

 

 

Share This Article
error: Content is protected !!
";