ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಹಾಗೂ ದಾವಣಗೆರೆ ಕಂದಾಯ ಜಿಲ್ಲೆಯನ್ನೊಳಗೊಂಡ ಚಿತ್ರದುರ್ಗ ಟೆಲಿಕಾಂ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯ 8 ಜನರನ್ನು ಸಂಸದರಾದ ಗೋವಿಂದ ಎಂ.ಕಾರಜೋಳರವರ ಶಿಫಾರಸ್ಸಿನ ಮೇರೆಗೆ 2 ವರ್ಷಗಳ ಅವಧಿಗೆ ನಾಮನಿರ್ದೇಶನ ಮಾಡಿ ಕೇಂದ್ರ ಸಂಪರ್ಕ ಇಲಾಖೆ ಆದೇಶ ಹೊರಡಿಸಿದೆ.
ಹೊಳಲ್ಕೆರೆಯಿಂದ ಸುಜಾತ. ಚಿತ್ರದುರ್ಗದಿಂದ ಬಿ.ಬಿ.ಹಟ್ಟಿ ಬೋರಯ್ಯ, ಹಿರಿಯೂರಿನಿಂದ ಕೇಶವಮೂರ್ತಿ, ಹೊಸದುರ್ಗದಿಂದ ಎನ್.ಆರ್.ಜಗದೀಶ್, ಚಳ್ಳಕೆರೆಯಿಂದ ಸಿ.ಎ.ಎಸ್.ಪ್ರಸಾದ್, ಮೊಳಕಾಲ್ಮೂರಿನಿಂದ ಶಿವದತ್ತ.ಟಿ. ಹಾಗೂ ಹೆಚ್.ಮೂರ್ತಿ, ಚಿತ್ರದುರ್ಗದಿಂದ ಎ.ವಿ.ಮಂಜುಳಾ ಹೀಗೆ ಒಟ್ಟು 8 ಜನರು ನಾಮನಿರ್ದೇಶನಗೊಂಡಿರುತ್ತಾರೆ.