ವಿವಿ ಸಾಗರ ಹಿನ್ನೀರಿಂದ 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು- ಸುಧಾಕರ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಸಚಿವ ಡಿ.ಸುಧಾಕರ್ ಮಾಡಿದರು.

ಹಿರಿಯೂರು ತಾಲೂಕಿನ ವಿವಿ ಸಾಗರ ಹಿನ್ನೀರಿಂದ 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

- Advertisement - 

ಜಲ ಶುದ್ಧಿಕರಣ ಘಟಕ ಮತ್ತು ಜಾಕ್ ವೆಲ್ ಪಾಯಿಂಟ್ ಸ್ಥಳಗಳನ್ನು ಭೇಟಿ ನೀಡಿ, ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು. ಅಗತ್ಯವಿರುವ ಅರಣ್ಯ ಅನುಮತಿಗೆ ಪ್ರಕ್ರಿಯೆ ವೇಗವನ್ನೂ ತಂದು, ಲಕ್ಕಿಹಳ್ಳಿ ಪವರ್ ಸ್ಟೇಷನ್ ಕಾಮಗಾರಿಯ ಆರಂಭಕ್ಕೂ ಸೂಚನೆ ನೀಡಿದರು.

ಐಮಂಗಲ ಹಂತ-1 ಮತ್ತು ಹಂತ-2 ಹಾಗೂ ಹರ್ತಿಕೋಟೆ ಯೋಜನೆಯ ಸ್ಥಳಗಳ ಪರಿಶೀಲನೆಯೂ ಈ ಸಂದರ್ಭದಲ್ಲಿ ನಡೆಸಿದರು.

- Advertisement - 

ಈ ಪರಿಶೀಲನೆ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

Share This Article
error: Content is protected !!
";