ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗಿರಿಧಾಮದಲ್ಲಿ 14ನೇ ಸಚಿವ ಸಂಪುಟ ಸಭೆಯ ಆರಂಭಕ್ಕೂ ಮುನ್ನ, ನಂದಿ ಗಿರಿಧಾಮದಲ್ಲಿ ಅಕ್ಕ ಕೆಫೆ,
ಮಯೂರ ಪೈನ್ ಟಾಪ್ ಸನ್ ರೈಸ್ ರೆಸ್ಟೋರೆಂಟ್ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಸಂಪುಟ ಸಹೋದ್ಯೋಗಿ ಮಿತ್ರರ ಜೊತೆಗೂಡಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರುಗಳು ಭೂಮಿಪೂಜೆ ನೆರವೇರಿಸಿದರು.
ಐತಿಹಾಸಿಕ ನಂದಿ ಗಿರಿಧಾಮವು ಜಿಲ್ಲೆ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ, ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

