ಸಿಎಂ, ಡಿಸಿಎಂ ಅವರ ದೆಹಲಿ ಪ್ರವಾಸಕ್ಕೆ ಬೇರ ಅರ್ಥ ಕಲ್ಪಿಸುವುದು ಬೇಡ

News Desk

ಚಂದ್ರವಳ್ಳಿ ನ್ಯೂಸ್, ಧಾರವಾಡ:
 ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಹೋಗಿರುವುದಕ್ಕೆ ಬಣ್ಣ ಕಟ್ಟುವುದು ಬೇಡ, ಅವರಿಬ್ಬರೂ ತಮ್ಮ ತಮ್ಮ ಕೆಲಸಗಳಿಗಾಗಿ ಹೋಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದರು.

ಧಾರವಾಡ ಪ್ರವಾಸದಲ್ಲಿರುವ ಸಚಿವೆ, ಮಂತ್ರಿಗಳಾದವರಿಗೆ ಕೇಂದ್ರ ಸರ್ಕಾರದ ಜೊತೆ ಬಹಳಷ್ಟು ಕೆಲಸಗಳಿರುತ್ತವೆ, ತಾನು ಸಹ ಕೆಲಸದ ನಿಮಿತ್ತ ಆಗಾಗ್ಗೆ ದೆಹಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.

- Advertisement - 

ವಿಪಕ್ಷದ ನಾಯಕರು ಏನಾದರೂ ಹೇಳುತ್ತಲೇ ಇರುತ್ತಾರೆ, ಕಾಂಗ್ರೆಸ್ ಪಕ್ಷಕ್ಕೆ 136 ಸೀಟುಗಳು ಬಂದಾಗ್ಯೂ ಅವರು ಸರ್ಕಾರ ಮೂರು ತಿಂಗಳು ಕೂಡ ಬಾಳಲ್ಲ ಎಂದಿದ್ದರು, ಅವರ ಮಾತು ಬಿಡಿ; ಮುಖ್ಯಮಂತ್ರಿ ಬದಲಾಗುವಂಥ ಸನ್ನಿವೇಶವೇ ಇಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

- Advertisement - 
Share This Article
error: Content is protected !!
";