ಏರೋಸ್ಪೇಸ್ ವಲಯಕ್ಕೆ ಮತ್ತಷ್ಟು ಬಲ ತುಂಬಿದ ಕಾಲಿನ್ಸ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಏರೋಸ್ಪೇಸ್ ವಲಯಕ್ಕೆ ಮತ್ತಷ್ಟು ಬಲ ತುಂಬಿದ ಕಾಲಿನ್ಸ್! ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ವಿಶ್ವದರ್ಜೆಯ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉದ್ಘಾಟಿಸಿದ್ದು ಸಂತಸ ತರಿಸಿದೆ.

- Advertisement - 

26 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ವಿಶ್ವ ದರ್ಜೆಯ ಘಟಕವು ಭಾರತದ ಪ್ರಮುಖ ಏರೋಸ್ಪೇಸ್, ವಾಯುಯಾನ ಮತ್ತು ಸುಧಾರಿತ ಉತ್ಪಾದನಾ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ಮ ಕೈಗಾರಿಕಾ ನೀತಿ 2025ರ ದೃಷ್ಟಿಕೋನಕ್ಕೆ ಹೊಂದಿಕೊಂಡ ಈ ಹೂಡಿಕೆ, ರಾಜ್ಯವನ್ನು ಹೈಟೆಕ್ ಕೈಗಾರಿಕೆಗಳ ಪ್ರಮುಖ ತಾಣವಾಗಿ ಮತ್ತೊಂದು ಹಂತಕ್ಕೆ ಏರಿಸಿದೆ.

- Advertisement - 

ಕಾಲಿನ್ಸ್ ಏರೋಸ್ಪೇಸ್ ಮತ್ತು RTX ತಂಡದ ನಿರಂತರ ನಂಬಿಕೆ ಮತ್ತು ಪಾಲುದಾರಿಕೆಗೆ ಸಚಿವ ಎಂ.ಬಿ ಪಾಟೀಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.

 

 

Share This Article
error: Content is protected !!
";