ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾಚಾರದಲ್ಲಿ “ಕಾಂಗ್ರೆಸ್” ಯಾವಾಗಲು ಒಂದು ಕೈ ಮುಂದೆ ಎಂದು ಜೆಡಿಎಸ್ ಆರೋಪಿಸಿದೆ.
ಬೆಂಗಳೂರು ಸುರಂಗ ಯೋಜನೆ (ಹೆಬ್ಬಾಳ ಎಸ್ಟೀಮ್ ಮಾಲ್ನಿಂದ – ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ) ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹಗಲು ದರೋಡೆಯ ಮುಂದುವರಿದ ಭಾಗ ಎಂದು ಜೆಡಿಎಸ್ ದೂರಿದೆ.
ಮುಂದಿನ ಚುನಾವಣೆಗೆ “ಟನಲ್ ರೋಡ್” ಕಾಂಗ್ರೆಸ್ʼಗೆ ಹಣಗಳಿಸುವ ಅಕ್ಷಯಪಾತ್ರೆ ! ಯಾಕೆಂದರೆ, ಹಿಮಾಲಯ ಕಣಿವೆಯಲ್ಲಿ, ಮುಂಬೈ ಸಮುದ್ರದಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ತಗುಲಿದೆ ವೆಚ್ಚಕಿಂತಲೂ ಹತ್ತಾರು ಪಟ್ಟು ಬೆಂಗಳೂರು ಸುರಂಗ ರಸ್ತೆ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.