ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಭಾರತೀಯ ಕಾಂಗ್ರೆಸ್ ಪಕ್ಷದ ಸುಳ್ಳಿನ ಕಂತೆ ! ಆರಂಭವಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಕೆಆರ್ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದರು ಎಂದು ಹಸಿ ಹಸಿ ಸುಳ್ಳು ಹೇಳಿರುವ ಸಚಿವ ಹೆಚ್.ಸಿ ಮಹದೇವಪ್ಪಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಹರಿಹಾಯ್ದಿದೆ.
ಸತ್ಯ: ಕೆಆರ್ಎಸ್ ಅಣೆಕಟ್ಟೆ (1911-1924) ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ವಾಸ್ತವ ಎಂದರೆ: ಟಿಪ್ಪು 1799 ರಲ್ಲಿ ನಿಧನ – 112 ವರ್ಷಗಳ ಹಿಂದೆ ಎಂದು ಜೆಡಿಎಸ್ ತಿಳಿಸಿದೆ.
1799ರಲ್ಲಿ ಸತ್ತ ಟಿಪ್ಪುವನ್ನು ಗೋರಿಯಿಂದ ಎಬ್ಬಿಸುವ ಕೆಲಸ ಮಾಡುವ ಸಚಿವ ಮಹದೇವಪ್ಪ , ಮೈಸೂರು ಮಹಾರಾಜರ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

