ಕಾಂಗ್ರೆಸಿಗರು ನಿಯತ್ತಿನ ನಾಯಿಗಳು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಟ್ಟಾ ಕಾಂಗ್ರೆಸಿಗರು ನಿಯತ್ತಿನ ನಾಯಿಗಳು. ನಾಯಿಗಳ ಸ್ವಭಾವ ಋಣ ತೀರಿಸೋದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಸಚಿವ ಮಹಾದೇವಪ್ಪ ಅವರಿಗೆ ತಿರುಗೇಟು ನೀಡಿದರು.

ನಾಯಕತ್ವ ಬದಲಾವಣೆ ಬಗ್ಗೆ ಶಾಸಕರ ಹೇಳಿಕೆ ಕುರಿತು ಸಚಿವ‌ಹೆಚ್.ಸಿ.ಮಹಾದೇವಪ್ಪ, ಬೀದಿ ನಾಯಿಗಳ ಕುರಿತಂತೆ ಹೈಕೋರ್ಟ್ ಸೂಚನೆ ಪ್ರಸ್ತಾಪಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೀದಿನಾಯಿಗಳಿಗೆ ಊಟ ಹಾಕೋದು, ನನ್ನನ್ನು ಕಾಯುತ್ತೆ ಅಂತ. ನಾಯಿಗಿರುವ ನಿಯತ್ತು, ಮನುಷ್ಯನಿಗಿಲ್ಲ‌ಎಂಬ ಸಾಕಷ್ಟು ನಾನ್ನುಡಿಗಳಿವೆ. ಯಾವತ್ತೂ ಕೂಡ ಋಣ ಇಟ್ಕೊಂಡು ತೀರಿಸುವುದು ನಾಯಿಗಳು ಎಂದು ಸುರೇಶ್ ಕಟು ಶಬ್ದಗಳಲ್ಲಿ ಟೀಕಿಸಿದರು.

- Advertisement - 

ಶಾಸಕರ ವಿದೇಶಿ ಪ್ರವಾಸ ಕುರಿತು ಮಾತನಾಡಿದ ಸುರೇಶ್, ಶಾಸಕರಾದವರನ್ನು ಪ್ರವಾಸಕ್ಕೆ ಕರ್ಕೊಂಡು ಹೋಗಿರುತ್ತಾರೆ‌. ಕೆಲವರು ದೇಶ ನೋಡಲು ಹೋಗಿರುತ್ತಾರೆ. ಕೆಲವರು ವಿಶ್ವಾಸಕ್ಕೆ ಹೋಗಿರುತ್ತಾರೆ. ನೀವೂ ಶಾಸಕರಾದ್ರೆ ವಿದೇಶ ಪ್ರವಾಸಕ್ಕೆ ಕರ್ಕೊಂಡು ಹೋಗ್ತಾರೆ. ವಿದೇಶ ಪ್ರವಾಸದಿಂದ ಮೈಂಡ್ ಪ್ರೆಶ್ ಆಗುತ್ತದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಉತ್ಪನ್ನಕ್ಕೆ ಅಪಪ್ರಚಾರ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿ. ನಂದಿನಿ ಉತ್ಪಾದನೆಯಲ್ಲಿ ಗುಣಮಟ್ಟವಿದೆ. ಅಲ್ಲಿ ಕಲಬೆರಕೆ ಇರಲ್ಲ. ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡ್ತಾರೆ. ಅದರಲ್ಲಿ ಕೆಲವು ಖಾಸಗಿಯವರೂ ಇರಬಹುದು‌. ನಂದಿನಿ ಗುಣಮಟ್ಟದಲ್ಲಿ ಹಿಂದೆ ಅನ್ನೋದು ಸರಿಯಲ್ಲ‌. ಮುಂದಕ್ಕೆ ಕೂಡ ಅದನ್ನು ಮುಂದುವರಿಸುತ್ತೇವೆ. ವ್ಯಾಪಾರ ಅಂದ್ರೆ ಪೈಪೋಟಿ ಇದ್ದೇ ಇರುತ್ತೆ. ಇದೆಲ್ಲ ಸಹಜ ಎಂದು ಸುರೇಶ್ ತಿಳಿಸಿದರು.

- Advertisement - 

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಗಳೂರಿನಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ದಲಿತ ಸಿಎಂ ಕುರಿತ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಹೆಚ್.ಸಿ.ಮಹದೇವಪ್ಪನವರು ಅವರ ಅಭಿಪ್ರಾಯ ಹೇಳಿದ್ದಾರೆ. ಮಹದೇವಪ್ಪ ಸಮರ್ಥರು. ಯಾವುದೇ ಜವಾಬ್ದಾರಿ ಕೊಟ್ಟರೂ ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಮರ್ಥ್ಯವಿದೆ. ಅದಕ್ಕೆ ಅವರು ಹೇಳಿದ್ದಾರೆ. ಜನಸಮುದಾಯದಲ್ಲಿ ಕೆಲವರು ಅವರವರ ನಾಯಕರು ಎಂದು ಆರಿಸಿಕೊಳ್ಳುತ್ತಾರೆ. ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಅದನ್ನು ತಪ್ಪು ಅಂತಾ ನಾವು ಹೇಳುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಅದು. ನಮ್ಮಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ. ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡ್ತಾರೆ‌. ಯಾರೋ ಹತ್ತು ಜನ ನನ್ನ ಪರವಾಗಿ ಜೈಕಾರ ಹಾಕಿದ್ರೆ ಆಗಲ್ಲ. ಆದ್ರೆ ಹೈಕಮಾಂಡ್‌ನವರು ಅದನ್ನೆಲ್ಲಾ ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ಆ ಸಂದರ್ಭ ಇದೆ ಅಂತಾ ನನಗೆ ಅನಿಸಲ್ಲ. ಈಗ ದಲಿತ ಸಿ.ಎಂ ಎಂಬ ಚರ್ಚೆಯೇ ಇಲ್ಲ. ನಾವು ಆಡಳಿತದ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಪರಮೇಶ್ವರ್ ಹೇಳಿದರು.

 

 

Share This Article
error: Content is protected !!
";