ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿಯಲ್ಲಿ ‘ಜೀನ್ಸ್ ಪಾರ್ಕ್‘ ನಿರ್ಮಾಣಕ್ಕಾಗಿ ಕೆಐಎಡಿಬಿ(KIADB) ವತಿಯಿಂದ 154 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಕೊಟ್ಟ ಭರವಸೆ ಸಾಕಾರಗೊಂಡಿದೆ ಎಂದು ಕಾಂಗ್ರೆಸ್ ತಿಳಿಸಿದೆ.
‘ಜೀನ್ಸ್ ಪಾರ್ಕ್‘ ನಿರ್ಮಾಣದಿಂದಾಗಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆ, ಜೀನ್ಸ್ ಮಾರುಕಟ್ಟೆ ವ್ಯವಸ್ಥೆಗೂ ಚೈತನ್ಯ ದೊರಕಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಬಳ್ಳಾರಿ ಜನರ ಬಹು ದಿನಗಳ ಕನಸು ನನಸಾಗಿಸುವ ಮೂಲಕ ನುಡಿದಂತೆ ನಡೆದ ಗ್ಯಾರಂಟಿ ಸರ್ಕಾರ ಎಂದು ಕಾಂಗ್ರೆಸ್ ಮೆಚ್ಚುಗೆ ವ್ಯಕ್ತಪಡಿಸಿದೆ.