ಫೆ-21ರಂದು ಉದ್ದಿಮೆದಾರರಿಗೆ ಯೋಜನೆಗಳು ಹಾಗೂ ಸಬ್ಸಿಡಿ ಕುರಿತು ಸಮಾಲೋಚನ ಸಭೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಪರಿಶಿಷ್ಟ ಜಾತಿ
, ಪರಿಶಿಷ್ಟ ಪಂಗಡ ಹಾಗೂ ಎಂಟರ್ ಪ್ರೀನ್ಯೂರ್‍ಸ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್ ವತಿಯಿಂದ ಉದ್ದಿಮೆದಾರರಿಗೆ ವಿವಿಧ ಯೋಜನೆಗಳು ಹಾಗೂ ಸಬ್ಸಿಡಿಗಳ ಕುರಿತು ಸಮಾಲೋಚನ ಸಭೆಯನ್ನು ಫೆ.೨೧ ರಂದು ಮಧ್ಯಾಹ್ನ ೨-೩೦ ಕ್ಕೆ ದಾವಣಗೆರೆ ರಸ್ತೆ ಆಜಾದ್ ಮಿಲ್ ಪಕ್ಕದಲ್ಲಿರುವ  ಪ್ಯಾರಾಡೈಸ್ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾಜಿ ರಾಜ್ಯಸಭೆ ಸದಸ್ಯ ಡಾ.ಹನುಮಂತಯ್ಯ ಎಲ್. ಸಭೆ ಉದ್ಘಾಟಿಸುವರು.

- Advertisement - 

ಕರ್ನಾಟಕ ರಾಜ್ಯ ಎಸ್ಸಿ. ಎಸ್ಟಿ. ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಮಂಜುನಾಥಸ್ವಾಮಿ ಬಿ.ಕೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಾಬು ಆರ್. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ ಅಭಿವೃದ್ದಿ ಅಧಿಕಾರಿ ಅನಿಲ್ ಕುಮಾರ್ ರಾಥೋಡ್, ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ದೊರೆಸ್ವಾಮಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ರಾಘವೇಂದ್ರ ಎಂ.

- Advertisement - 

ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸೈಯದ್ ನಯೀಮ್ ಅಹಮದ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ, ದಾವಣಗೆರೆ ಜಿಲ್ಲಾ ಎಸ್ಸಿ.ಎಸ್ಟಿ.ಉದ್ದಿಮೆದಾರರ ಸಂಘದ ಅಧ್ಯಕ್ಷ ಚನ್ನಕೇಶವ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಉದ್ದಿಮೆದಾರ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎಂಟರ್ ಪ್ರೀನ್ಯೂರ್‍ಸ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಮನವಿ ಮಾಡಿದ್ದಾರೆ.

Share This Article
error: Content is protected !!
";