ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಪಕ್ಷದ DNA ಯಲ್ಲೇ ಇದೆ, ಶಾಸಕರ ಆಡಿಯೋ ಬಗ್ಗೆ ತನಿಖೆ ಆಗಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಪಕ್ಷದ DNA ಯಲ್ಲೇ ಇದೆ ಎಂದು ಜೆಡಿಎಸ್ ಟೀಕಿಸಿದೆ.

- Advertisement - 

ವಸತಿ ಇಲಾಖೆ ಸಚಿವ‌ ಜಮೀರ್ ಅಹ್ಮದ್ ಹಣ ಕೊಟ್ಟವರಿಗಷ್ಟೇ ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಈ ಸತ್ಯ ಹೊರಬಂದರೆ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಸ್ವಪಕ್ಷದ ಶಾಸಕ ಬಿ.ಆರ್.‌ ಪಾಟೀಲ್‌ ಹೇಳಿರುವುದು ಕಾಂಗ್ರೆಸ್ಸಿಗರ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಜೆಡಿಎಸ್ ಹರಿಹಾಯ್ದಿದೆ. 

- Advertisement - 

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರೇಕರ್ನಾಟಕ ಕಾಂಗ್ರೆಸ್ ಸರ್ಕಾರದ ಕರಾಳಮುಖವನ್ನು ಸ್ವತಃ ಆಡಳಿತ ಪಕ್ಷದ ಶಾಸಕರುಗಳೇ ಬಿಚ್ಚಿಡುತ್ತಿದ್ದಾರೆ. ವಸತಿ ಇಲಾಖೆಯ ಹಗರಣದ ಕುರಿತು ಶಾಸಕರ ಆಡಿಯೋ ಬಗ್ಗೆ ತನಿಖೆ ಆಗಬೇಕು ಎಂದು ಜೆಡಿಎಸ್ ಪಕ್ಷವು ಒತ್ತಾಯಿಸಿದೆ.

- Advertisement - 
Share This Article
error: Content is protected !!
";