ಸಂಕ್ರಾಂತಿ ಪ್ರಯುಕ್ತ ಮಧುರನ ಹೊಸಹಳ್ಳಿಯಲ್ಲಿ ಕ್ರಿಕೆಟ್ ಪಂದ್ಯಾವಳಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿಯ ಮಧುರನಹೊಸಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಸಂಕ್ರಾಂತಿ ಪ್ರಯುಕ್ತ  ಮಧುರನಹೊಸಹಳ್ಳಿ ಪ್ರೀಮಿಯರ್ ಲೀಗ್ ಸೀಸನ್ 3 ಕ್ರಿಕೆಟ್ ಪಂದ್ಯಾವಳಿ ನಡೆಸಲಾಯಿತು.

 ಹೊನಲು ಬೆಳಕಿನ ಪಂದ್ಯಾವಳಿಯನ್ನು 2 ದಿನಗಳ ಕಾಲ ನಡೆದ ಪಂದ್ಯದಲ್ಲಿ 3 ತಂಡಗಳ ನಡುವೆ ನಡೆದ ಪಂದ್ಯಗಳಲ್ಲಿ ಎಂ.ತ್ಯಾಗರಾಜು ನೇತೃತ್ವದ ಮಧುಸೂದನ್ ನಾಯಕತ್ವದ ಎಂಸಿಸಿ ಕ್ರಿಕೆಟರ್ಸ್ ಮಧುರನಹೊಸಹಳ್ಳಿ ಪ್ರಥಮ ಬಹುಮಾನ ಗಳಿಸಿತು.

- Advertisement - 

ಟಿ.ಪ್ರಕಾಶ್ ನೇತೃತ್ವದ ಹರಿ ನಾಯಕತ್ವದ ಮಧುರನಹೊಸಹಳ್ಳಿ ಚಾಲೆಂಜರ್ಸ್ ದ್ವಿತೀಯ ಬಹುಮಾನ ಗಳಿಸಿದರೆ. ಚೇತನ್ ಕುಮಾರ್ ನೇತೃತ್ವದ ಅನಿಲ್ ಕುಮಾರ್ ನಾಯಕತ್ವ  ಮಾರುತಿ ಚಾಲೆಂಜರ್ಸ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಮಧುರನಹೊಸಹಳ್ಳಿ ಮತ್ತು ಅಕ್ಕಪಕ್ಕ ಗ್ರಾಮಗಳ ಯುವಕರು, ಗ್ರಾಮಸ್ಥರು ಭಾಗಿಯಾದ್ದರು.

- Advertisement - 

 

Share This Article
error: Content is protected !!
";