ಅಧಿಕಾರದ ದರ್ಪ ತಲೆಗೇರಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್‌ಡಿ.ಕೆ ಶಿವಕುಮಾರ್
ನಿಮಗೆ ಅಧಿಕಾರದ ದರ್ಪ ತಲೆಗೇರಿದೆ ಎಂದು ಜೆಡಿಎಸ್ ಆರೋಪಿಸಿದೆ. ರಾಜ್ಯದ ಮೇಕೆದಾಟು ವಿಚಾರವಾಗಿ ಇಂಡಿ ಕೂಟದ ಕಾಂಗ್ರೆಸ್‌ಮಿತ್ರಪಕ್ಷ ತಮಿಳುನಾಡಿನ ಸ್ಟಾಲಿನ್‌ಸರ್ಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಇಲ್ಲದ, ನೀವು ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಗೊಡ್ಡು ಬೆದರಿಕೆ ಹಾಕುತ್ತೀರಿ?

ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್‌ಪಕ್ಷದ ತಾಳಕ್ಕೆ ಕುಣಿಯದ ಚಿತ್ರರಂಗ ಹಾಗೂ ಕಲಾವಿದರ ಮೇಲೆ ಅಸೂಯೆ, ದ್ವೇಷ ಕಾರುವುದು ಎಷ್ಟು ಸರಿ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

- Advertisement - 

ತಮಿಳುನಾಡಿನ ಜೊತೆಗೆ ಅಡ್ಜಸ್ಟ್‌ಮೆಂಟ್‌ರಾಜಕೀಯ ಮಾಡಿಕೊಂಡು, ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್‌ಪಕ್ಷವನ್ನು ಯಾಕೆ ಬೆಂಬಲಿಸಬೇಕು ?  

ಉಪಮುಖ್ಯಮಂತ್ರಿ ಎಂಬುದನ್ನು ಮರೆತು, ಪಾಳೆಗಾರನಂತೆ ಹೆದರಿಸುವ, ಬೆದರಿಸುವ ಸೊಕ್ಕಿನ ಮಾತುಗಳಿಗೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಚ್ಚರಿಕೆ! ಎಂದು ಜೆಡಿಎಸ್ ಎಚ್ಚರಿಸಿದೆ.

- Advertisement - 

 

 

Share This Article
error: Content is protected !!
";