ಭದ್ರಾ ಹಿನ್ನೀರಿನಲ್ಲಿ ಆನೆಯ ಶವ ಪತ್ತೆ

News Desk

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಭದ್ರಾ ಹಿನ್ನೀರಿನಲ್ಲಿ ಕಾಡಾನೆಯೊಂದರ ಅಸ್ತಿಪಂಜರ ಪತ್ತೆಯಾಗಿದೆ. ಮೀನು ಹಿಡಿಯುವವರು ಆನೆಗಳ ಮೂಳೆಗಳನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

- Advertisement - 

ಅದರ ಅನ್ವಯ ಅಧಿಕಾರಿಗಳು ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ, ಅಲ್ದಾರ ವಿಭಾಗದ ಬೈರಾಪುರ ಹಿನ್ನೀರಿನ ಪ್ರದೇಶದಲ್ಲಿ ತಪಾಸಣೆ ನಡೆಸಿದ್ದಾರೆ.

- Advertisement - 

ಈ ವೇಳೆ ಸಲಗದ ಅಸ್ತಿ ಪಂಜರ ಪತ್ತೆಯಾಗಿದ್ದು ಆನೆಯ ತಲೆಬುರುಡೆಯಲ್ಲಿ ಹಲವು ರಂದ್ರಗಳು ಕಾಣಿಸಿವೆ. ಹೀಗಾಗಿ ದಂತಕ್ಕಾಗಿ ಆನೆಯನ್ನ ಹತ್ಯೆ ಮಾಡಿರುವ ಶಂಕೆಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

 

- Advertisement - 

Share This Article
error: Content is protected !!
";