ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿನ ಅನಧಿಕೃತ ನಿವೇಶನಗಳು, ಕಟ್ಟಡಗಳ ವಿರುದ್ಧ ಜಿಬಿಎ ಸಮರ ಸಾರಿದ್ದು ಶನಿವಾರ ಬೆಳ್ಳಂಬೆಳಗ್ಗೆ ಶ್ರೀನಿವಾಸಪುರದ ಕೋಗಿಲು ಲೇಔಟ್ನಲ್ಲಿ 200 ಹೆಚ್ಚು ಮನೆಗಳ ತೆರವು ಕಾರ್ಯ ಮಾಡಲಾಗಿತು.
14 ಎಕರೆ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 190ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದ ಜಿಬಿಎ ಕಾರ್ಯಕ್ಕೆ ಸೂರು ಕಳೆದುಕೊಂಡವರು ಹಿಡಿಶಾಪ ಹಾಕಿದ್ದಾರೆ. ಒಂದೇ ಒಂದೂ ಸೂಚನೆ ಕೊಡದೇ ಕೆಡವಿದ್ದಾರೆ ಅಂತಾ ಕೆಂಡಕಾರಿದ್ದಾರೆ.

