ವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮೂಢಾಚಾರವನ್ನು ತೊರೆದು ವೈಜ್ಞಾನಿಕತೆಯನ್ನು ಬಿತ್ತುವುದೇ ವಚನ ಚಳವಳಿಯ ಸಿದ್ದಾಂತವಾಗಿದ್ದು
, ಆದ್ಯವಚನಕಾರ ದೇವರ ದಾಸಿಮಯ್ಯ ಸಮಾಜದ ಕಂದಾಚಾರಗಳ ವಿರುದ್ದ ದನಿಯೆತ್ತಿದ ದಾರ್ಶನಿಕ ಎಂದು ತಹಶೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ ಹೇಳಿದರು.

ಇಲ್ಲಿನ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ದೇವಾಂಗ ಮಂಡಲಿ ನೇತೃತ್ವದಲ್ಲಿ ಸೋಮವಾರ ತಾಲೂಕು ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement - 

ಶ್ರೇಷ್ಠ ವ್ಯಕ್ತಿಗಳನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಬಾರದು. ಅವರ ಸಂದೇಶಗಳು ಮನುಕುಲದ ಒಳಿತಿನ ಆಶಯವನ್ನು ಹೊಂದಿದ್ದು, ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಆಗಬೇಕು. ವಚನ ಸಾಹಿತ್ಯದ ಮೂಲಕ ಲಿಂಗ ಸಮಾನತೆಯ ಮೌಲಿಕ ವಿಚಾರ ಪ್ರಸ್ಥಾಪಿಸಿದ ಮೊದಲಿಗ ಅವರು ಎಂದರು.

ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್ ಮಾತನಾಡಿ, ದಾಸಿಮಯ್ಯ ನೀಡಿದ ಸಾಮಾಜಿಕ ಸಂದೇಶ ಅನನ್ಯವಾದದ್ದು. ಜನಭಾಷೆಯಲ್ಲಿ ಸಾಹಿತ್ಯವನ್ನು ಕಟ್ಟಿಕೊಡುವ ಮೂಲಕ ಅವರು ಕ್ರಾಂತಿಗೆ ಮುನ್ನುಡಿ ಬರೆದರು. ದಾಸಿಮಯ್ಯನವರ ಕುರಿತು ಚಾರಿತ್ರಿಕವಾಗಿ ಅನೇಕ ನಂಬಿಕೆಗಳಿವೆ. ನೇಕಾರ ಸಮುದಾಯ ಪ್ರಾತಿನಿಧಿಕ ವ್ಯಕ್ತಿಯಾಗಿರುವ ದಾಸಿಮಯ್ಯ ಎಲ್ಲ ಸಮುದಾಯಗಳೂ ಆರಾಧಿಸಬೇಕಾದ ಅನನ್ಯ ಶರಣ ಎಂದರು.

- Advertisement - 

ಉಪನ್ಯಾಸ ನೀಡಿದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಕನ್ನಡ ಸಾಹಿತ್ಯ ಲೋಕದಲ್ಲಿ ತೀವ್ರ ಸಂಚಲನ ಸೃಷ್ಠಿಸಿದ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾದ ವಚನ ಚಳವಳಿಯ ಆದ್ಯ ಪ್ರವರ್ತಕರಾದ ದಾಸಿಮಯ್ಯ, ತನ್ನ ಕಾಯಕ ನಿಷ್ಟೆಯ ಮೂಲಕ ಸಮಾಜದ ಚಿಕಿತ್ಸಕ ಶಕ್ತಿಯಾಗಿ ಬೆಳೆದವರು. ಬಸವಾದಿ ಶರಣರಿಗೆ ಹಿರಿಯನಾಗಿ ದಾಸಿಮಯ್ಯ ಬಹುಮೂಲ್ಯ ದಿಕ್ಸೂಚಿಯನ್ನು ಕೊಟ್ಟಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಹಂಪಿ ವಿಶ್ವವಿದ್ಯಾಲಯದಲ್ಲಿ ಆರಂಭವಾದ ದಾಸಿಮಯ್ಯ ಅಧ್ಯಯನ ಪೀಠಕ್ಕೆ ಪುನಶ್ಚೇತನ ಅಗತ್ಯವಾಗಿದೆ. ದಾಸಿಮಯ್ಯ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ ಎಂದರು.

ವಿವಿಧ ಕ್ಷೇತ್ರದ 11 ಜನರಿಗೆ ಸನ್ಮಾನ:
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿರುವ ದೇವಾಂಗ ಸಮುದಾಯದ ಆರೂಢಿ ರಾಮಕೃಷ್ಣಪ್ಪ
, ಕೆ.ಪಿ.ಜಗನ್ನಾಥ್‌, ಕೆ.ಓ.ನಾಗರಾಜ್, ಪಿ.ಸಿ.ಲಕ್ಷ್ಮೀನಾರಾಯಣ್, ಕೆ.ಎಸ್.ಸುರೇಂದ್ರ, ಕೆ.ಪಿ.ವಾಸುದೇವ್, ಪ್ರೊ.ಕೆ.ಆರ್.ರವಿಕಿರಣ್, ಡಿ.ಶ್ರೀಕಾಂತ, ಕೆ.ಎಸ್.ಪ್ರಭಾ, ಎ.ಜಯಮ್ಮ ಮತ್ತು ಎಂ.ಕೆ.ವತ್ಸಲ ಸೇರಿದಂತೆ 11 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್‌, ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಪ್ರೊ.ಎಂ.ಜಿ.ಅಮರನಾಥ್, ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಎನ್.ಎಸ್.ಚಿಕ್ಕಣ್ಣ, ಖಜಾಂಚಿ ಎಚ್.ವಿ.ಅಖಿಲೇಶ್, ನಗರಸಭಾ ಸದಸ್ಯರಾದ ಎಚ್.ಎಸ್.ಶಿವಶಂಕರ್, ವತ್ಸಲ, ನವೀನ್‌ ಮತ್ತಿತರರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಜರಿದ್ದರು.

 

Share This Article
error: Content is protected !!
";