ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವಾಲಯಗಳ ಸ್ವಚ್ಛತಾ ಸಮಿತಿ ವತಿಯಿಂದ ಇಂದು ಕೊನಘಟ್ಟ ದಿನ್ನೆ ಆಂಜನೇಯ ಸ್ವಾಮಿ ದೇಗುಲದಲ್ಲಿ ಅಂತಿಮ ಅಂತದ ಸ್ವಚ್ಛತಾ ಕಾರ್ಯ ನಡೆಯಿತು ಸುಮಾರು 4:30 ಎಕರೆ ಜಗದಲ್ಲಿ ಬೆಳೆದಿದ್ದ ಬೇಲಿ ಹಾಗೂ ಮುಳ್ಳಿನ ಗಿಡಗಳನ್ನು ಮೂರು ಭಾನುವಾರಗಳಿಂದ ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಛತಾ ಸಮಿತಿಯ ಶ್ರಮದಾನಿಗಳು ತಮ್ಮ ಸೇವಾ ಮನೋಭಾವದಿಂದ ಸ್ವಚ್ಛಗೊಳಿಸಿ ಸುಂದರವಾಗಿಸಿದರು.
ಸ್ವಚ್ಛತಾ ಕಾರ್ಯದ ಜೊತೆಗೆ ಇಂದು ಸತತವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಶ್ರಮದಾನಿಗಳಿಗೆ ಶ್ರಮದಾನಿ ಕಿಟ್ ವಿತರಣೆಯನ್ನು ಇಂದು ಮಾಡಲಾಯಿತು. ಶ್ರಮಧಾನಿ ಕಿಟ್ ನಲ್ಲಿ ಒಂದು ಹೆಲ್ಮೆಟ್ ಟಿ-ಶರ್ಟ್ ಒಂದು ಬ್ಯಾಗ್ ತಂಪು ಕನ್ನಡಿಗ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು. ಶ್ರಮದಾನಿಗಳಿಗೆ ಕಿಟ್ ವಿತರಣೆಗೆ ಕೊಡುಗೆಯನ್ನು ನೀಡಿದ ದೊಡ್ಡಬಳ್ಳಾಪುರದ ದಾನಿಗಳಿಗೆ ದೊಡ್ಡಬಳ್ಳಾಪುರದ ದೇವಾಲಯಗಳ ಸ್ವಚ್ಛತಾ ಸಮಿತಿಯ ಮುಖಂಡರಾದ ಕೆಂಪೇಗೌಡ ಧನ್ಯವಾದಗಳು ಅರ್ಪಿಸಿದರು.
ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕೊನಘಟ್ಟ ಗ್ರಾಮದ ರಾಜಕೀಯ ಮುಖಂಡರಾದ ನಾರಾಯಣಸ್ವಾಮಿ, ದಿನ್ನೇ ಆಂಜನೇಯ ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ್ ಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನಂಜಮರಿಯಪ್ಪ ಸೇರಿದಂತೆ ದೇವಾಲಯಗಳ ಸ್ವಚ್ಛತಾ ಸಮಿತಿಯ ಎಲ್ಲಾ ಕಾರ್ಯಕರ್ತರು ಹಾಗೂ ಕೆಲವು ಕಾರ್ಯಕರ್ತರ ಕುಟುಂಬ ವರ್ಗದವರೂ ಸಹ ಹಾಜರಿದ್ದಿದ್ದು ಬಹಳಷ್ಟು ಸಂತಸಮಯವಾಗಿತ್ತು.

ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಛತಾ ಸಮಿತಿಯ ಕಾರ್ಯವೈಕರಿ ಪ್ರತಿ ತಿಂಗಳ ಎರಡು ಭಾನುವಾರಗಳಂದು ಸತತವಾಗಿ ನಡೆಯುತ್ತಿದೆ ಸ್ವಚ್ಛತಾ ತಂಡಕ್ಕೆ ಇನ್ನೂ ಹಲವು ಸ್ವಚ್ಛತಾ ಸಾಮಗ್ರಿಗಳ ಅವಶ್ಯಕತೆ ಇದ್ದು ಸೇವಾ ಮನೋಭಾವ ಹೊಂದಿರುವವರು ಸ್ವಚ್ಛತಾ ತಂಡಕ್ಕೆ ವಸ್ತುಗಳನ್ನು ನೀಡಬಹುದಾಗಿದೆ ಯಾರಾದರೂ ಸ್ವಚ್ಛತಾ ತಂಡಕ್ಕೆ ಕೊಡುಗೆಯನ್ನು ನೀಡಬಯಿಸುವವರು 98866 85458 ಈ ನಂಬರ್ ಅನ್ನು ಸಂಪರ್ಕಿಸಬಹುದಾಗಿದೆ.

