ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜ್ಯ ರೈಲ್ವೆ ಮತ್ತು ಜಲ ಶಕ್ತಿ ಸರ್ಕಾರದ ಸಚಿವರಾದ ವಿ.ಸೋಮಣ್ಣ ಅವರು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮೇ.7 ರಂದು ಮಧ್ಯಾಹ್ನ 1.30ಕ್ಕೆ ದಾವಣಗೆರೆ ಆಗಮಿಸುವರು. ನಂತರ ಮ. 2 ಗಂಟೆಗೆ ಸಮೃದ್ದಿ, 1991, ಎಂ.ಸಿ.ಕಾಲೋನಿಯ ಎ ಬ್ಲಾಕ್, ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ.3.30ಕ್ಕೆ ದಾವಣಗೆರೆ ರೈಲ್ವೆ ನಿಲ್ದಾಣದ ಪರಿಶೀಲನೆ ಮತ್ತು ಎಲ್.ಸಿ 199ಎ ಬದಲಿಗೆ ರೈಲ್ವೆ ಅಂಡರ್ ಬ್ರಿಡ್ಜ್ ಶಂಕುಸ್ಥಾಪನೆ ನೆರೆವೇರಿಸುವರು.
ಸಂಜೆ 4.30ಕ್ಕೆ ದಾವಣಗೆರೆಯಿಂದ ಹೊರಟು ಹರಿಹರಕ್ಕೆ ತೆರಳುವರು. ನಂತರ 5 ಗಂಟೆಗೆ ಹರಿಹರದ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲ್ದಾಣ ಮತ್ತು ಇತರೆ ರೈಲ್ವೆ ಕಾಮಗಾರಿಗಳ ಪರಿಶೀಲನೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.