ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕಾರ್ಪೇನಹಳ್ಳಿಯ ಡಾ.ಮಾರಣ್ಣನವರ ಪತ್ನಿ ಡಾ.ಆಲಮ್ಮಮಾರಣ್ಣನವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ
ಮಾಡಿರುವ ಗಣನೀಯ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತೋಷದ ಸಂಗತಿ.
ಡಾ.ಆಲಮ್ಮ ಮಾರಣ್ಣನವರಿಗೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ ಮತ್ತು ಆಯುಷ್ಯ ನೀಡಿ ಮತ್ತೊಷ್ಟು ಸೇವೆ ಮಾಡುವಂತಹ ಶಕ್ತಿ ನೀಡಲಿ ಎಂದು ಸಮಾಜದ ಮುಖಂಡರಾದ ಶಿವಭದ್ರಯ್ಯ ಅವರು ಅಭಿನಂದನೆ ತಿಳಿಸಿ ಆಶಿಸಿದ್ದಾರೆ.


