ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ 11 ನೇ ಕರ್ನಾಟಕ ರಾಜ್ಯ ಭಾರತೀಯ ಪ್ರಾಸ್ಥೊಡಾಂಟಿಕ್ಸ್ ಸೊಸೈಟಿಯ ಕರ್ನಾಟಕ ರಾಜ್ಯ ಶಾಖೆಯ ಸಮ್ಮೇಳನದಲ್ಲಿ,
ಬೆಳಗಾವಿಯ ಕೆ ಎಲ್ ಇ ವಿಶ್ವನಾಥ್ ಕತ್ತಿ ದಂತ ಮಹಾವಿದ್ಯಾಲಯದ ಪ್ರಾಸ್ಥೊಡಾಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಆನಂದಕುಮಾರ್ ಜಿ. ಪಾಟೀಲ್ ಅವರು ಭಾರತೀಯ ಪ್ರಾಸ್ಥೊಡಾಂಟಿಕ್ ಸೊಸೈಟಿ, ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ನೇಮಕಾತಿಯು ಡಾ.ಆನಂದಕುಮಾರ್ ಜಿ. ಪಾಟೀಲ್ ಅವರು ಪ್ರಾಸ್ಥೊಡಾಂಟಿಕ್ಸ್ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಅವರ ಸಮರ್ಪಣೆ ಮತ್ತು ದಂತ ಶಿಕ್ಷಣ ಮತ್ತು ರೋಗಿಗಳ ಆರೈಕೆಗೆ ಅವರ ನಿರಂತರ ಕೊಡುಗೆಗಳಿಗೆ ಅರ್ಹವಾದ ಮನ್ನಣೆಯಾಗಿದೆ.