ತುಲಾಭಾರದ ಹರಕೆ ತೀರಿಸಿದ ಡಾ.ಧನಂಜಯ ಸರ್ಜಿ

khushihost

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ಗಣೇಶೋತ್ಸವ ಅಂಗವಾಗಿ ಎಂಎಲ್‌ಸಿ ಡಾ!!ಧನಂಜಯ ಸರ್ಜಿ ಅವರಿಗೆ ತುಲಾಬಾರ ನಡೆದಿದೆ. ಎಂ ಎಲ್ ಸಿ ಚುನಾವಣೆಯಲ್ಲಿ ಗೆದ್ದವೇಳೆ ಗಣಪತಿ ಉತ್ಸವದಲ್ಲಿ ಡಾ!!.ಸರ್ಜಿ ಅವರಿಗೆ ತುಲಾಬಾರ ನಡೆಸುವುದಾಗಿ ಹಿರಿಯರೊಬ್ಬರು ಹರಕೆ ಹೊತ್ತುಕೊಂಡಿದ್ದು ಆ ಹರಕೆಯನ್ನು ನಿನ್ನೆ ಡಾ!!.ಸರ್ಜಿ ನಡೆಸಿಕೊಟ್ಟಿದ್ದಾರೆ.

- Advertisement - 

ಶಿವಮೊಗ್ಗ ನಗರದ ಜಿ ಎಸ್ ಬಿ ಸಮಾಜದ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ 59 ನೇ ಗಣೇಶೋತ್ಸವದ ಅಂಗವಾಗಿ ಭಾನುವಾರ ತುಲಾಭಾರ ಸೇವೆಯನ್ನ ಹಮ್ಮಿಕೊಳ್ಳಲಾಗಿತ್ತು.‌

- Advertisement - 

ಡಾ!!.ಸರ್ಜಿ ಅವರು ಕುಟುಂಬ ಸಮೇತರಾಗಿ ತುಲಾಬಾರದಲ್ಲಿ ಪಾಲ್ಗೊಂಡು ಹರಕೆ ನಡೆಸಿಕೊಟ್ಟಿದ್ದಾರೆ. ಬೆಲ್ಲದ ತುಲಾಭಾರ ಸೇವೆಯನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಲಾಯಿತು. ಈ ವೇಳೆ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ ಕಾಮತ್ , ನಿರ್ದೇಶಕರುಗಳು, ಸಮಾಜದ ಮಾತೃ ಮಂಡಳಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.

- Advertisement - 
Share This Article
error: Content is protected !!
";