ನಿಧನರಾದರೆ ಇಡೀ ಗ್ರಾಮಸ್ಥರೆಲ್ಲರೂ ಮೂರು ದಿನಗಳ  ಕಾರ್ಯ ಮಾಡುವ ಪದ್ಧತಿ ಮೆಚ್ಚುಗೆ ಪಡೆದಿದೆ-ಡಾ.ಪ್ರಭಾ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮದ ವಿಶೇಷತೆ ಕೇಳಿ‌ನಿಜಕ್ಕೂ ಅಭಿಮಾನವೆನಿಸಿತು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಈ ಗ್ರಾಮದಲ್ಲಿ ಯಾರಾದರೂ ನಿಧನರಾದರೆ, ಇಡೀ ಗ್ರಾಮಸ್ಥರೆಲ್ಲರೂ ಸೇರಿ ಮೂರು ದಿನಗಳ  ಕಾರ್ಯಕ್ರಮವನ್ನು ಪೂರ್ಣಗೊಳಿಸಿ ಉಳಿದ ಹಣವನ್ನು ಅವರ ಮೃತರ ಕುಟುಂಬಕ್ಕೆ ನೀಡುವ ಮೂಲಕ ನೆರವಾಗುತ್ತಾರೆ.

ಈ ರೀತಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಹಾಗೂ ಆರ್ಥಿಕವಾಗಿ ಧೈರ್ಯ ನೀಡುತ್ತಾರೆ ಎಂಬುದನ್ನು ಕೇಳಿ  ಮಾನವೀಯ ಮೌಲ್ಯಗಳು ಇಂದಿಗೂ ಇದೆ ಎನಿಸಿತು ಎಂದು ಡಾ.ಪ್ರಭಾ ಹೇಳಿದರು.

- Advertisement - 

ಇದೇ ವೇಳೆ ಗ್ರಾಮದ ಪರಿಮಿತಿಯಲ್ಲಿ ಸುಮಾರು 1.15 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಸುಮಾರು 1 ಕೋಟಿ 60 ಲಕ್ಷ ರೂಪಾಯಿ ವೆಚ್ಚದಲ್ಲಿ ದಾವಣಗೆರೆ ತಾಲ್ಲೂಕು ಕೈದಾಳೆ ಗ್ರಾಮದ ಪರಿಮಿತಿಯಲ್ಲಿ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಜೊತೆಗೆ ಸೇತುವೆಯ ಪುನರ್ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು ಎಂದು ಸಂಸದರು ತಿಳಿಸಿದರು.

- Advertisement - 

 

Share This Article
error: Content is protected !!
";