ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೇತ್ರ ಚಿಕಿತ್ಸೆ ನೀಡಿದ ಶಾಸಕ ಡಾ.ಶ್ರೀನಿವಾಸ್

News Desk

 ಚಂದ್ರವಳ್ಳಿ ನ್ಯೂಸ್, ಕೂಡ್ಲಿಗಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣಿನ ಪರೀಕ್ಷೆ ಮಾಡಿ ಅತ್ಯಧಿಕ ಬೆಲೆಯ ಕನ್ನಡಕವನ್ನು ಕೂಡ್ಲಿಗಿ ಶಾಸಕ ಶ್ರೀನಿವಾಸ್ ಎನ್ ಟಿ ಹಾಗೂ ಅವರ ಪತ್ನಿ ಡಾ. ಪುಷ್ಪಾ ಶ್ರೀನಿವಾಸ್ ಮುಖ್ಯಮಂತ್ರಿ ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ. 

ರಾಜ್ಯದ ಉದ್ದಗಲಕ್ಕೂ ಹಗಲಿರಳು ಸಂಚಾರ ಮಾಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹಾಗೂ ಸೂಕ್ತ ಸಮಯದಲ್ಲಿ ಪಂಚ ಗ್ಯಾರೆಂಟಿಗಳನ್ನು ಕೊಟ್ಟ ಮಾತಿನಂತೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಎನ್ ಟಿ ಅವರು ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕಾವೇರಿಯಲ್ಲಿ ಪರೀಕ್ಷೆ ಮಾಡಿದರು.

- Advertisement - 

ಕೂಡ್ಲಿಗಿ ಶಾಸಕ ಶ್ರೀನಿವಾಸ್ ಹಾಗೂ ದಂಪತಿ ಡಾ.ಪುಷ್ಪಾ ಶ್ರೀನಿವಾಸ್ ರವರಿಂದ ಸಿಎಂಗೆ ಅತ್ಯಧಿಕ ಬೆಲೆಯ ಕನ್ನಡಕ ಕೊಡುಗೆ ನೀಡಲಾಗಿದೆ ಎಂದು  ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.

- Advertisement - 
Share This Article
error: Content is protected !!
";