ವಿಕಸಿತ ಭಾರತ ಕನಸು ಸಾಕಾರ ಮಾಡಲು ಒಟ್ಟಾಗಿ ದುಡಿಯೋಣ-ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾನು ಅತ್ಯಂತ ಹೆಮ್ಮೆಯಿಂದ ಈ‌ ಧ್ವಜವನ್ನು ಹಿಡಿದಿದ್ದೇನೆ. ಭರವಸೆಯಿಂದ ಮತ್ತು ಆತ್ಮವಿಶ್ವಾಸದಿಂದ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ-ಬಲಿದಾನಗಳನ್ನು ಸ್ಮರಿಸೋಣ. ವೀರ ಯೋಧರಿಗೆ, ಆಪರೇಷನ್ ಸಿಂಧೂರದಲ್ಲಿ ಮೆರೆದ ಕಲಿಗಳಿಗೆ ಮತ್ತು ರಾಷ್ಟ್ರವನ್ನು ರಕ್ಷಿಸುತ್ತಿರುವ ಪ್ರತೀ ಭಾರತೀಯ ಪ್ರಜೆಗೂ ನನ್ನ ಗೌರವ ಸಮರ್ಪಣೆ ಮಾಡುತ್ತೇನೆಂದು ಅವರು ತಿಳಿಸಿದರು.

- Advertisement - 

ನಾನು 79ನೇ ಸ್ವಾತಂತ್ರ್ಯ ದಿನೋತ್ಸವದಂದು ನನ್ನ ಪುತ್ರನೊಂದಿಗೆ ತ್ರಿವರ್ಣ ಧ್ವಜದ ಮುಂದೆ ನಿಂತಾಗ ಸ್ವಾವಲಂಬಿ, ಬಲಿಷ್ಠ ಭಾರತದ ಕನಸುಗಳು, ಸಾಧನೆಗಳ ಜತೆಗೆ ಈ ಮಹಾನ್‌ ಧ್ವಜದ ಐತಿಹಾಸಿಕ ಮಹತ್ವ, ಅದು ಮೂಡಿಸುವ ಧೈರ್ಯ ಮತ್ತು ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು.

2047ರ ವೇಳೆಗೆ ವಿಕಸಿತ ಭಾರತ ಕನಸು ಸಾಕಾರ ಮಾಡಲು ಪ್ರತಿಯೊಬ್ಬರು ಹೃದಯಪೂರ್ವಕ ಒಟ್ಟಾಗಿ ಕೆಲಸ ಮಾಡೋಣ ಎಂದು ನಿಖಿಲ್ ಕರೆ ನೀಡಿದರು.

- Advertisement - 

 

Share This Article
error: Content is protected !!
";