ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ನಗರದ ರಂಗನಾಥ ಸ್ಟುಡಿಯೋ ಮಾಲೀಕ ಪಾರ್ಥಸಾರಥಿಯವರ ಸೊಸೆ ನಂದಿನಿ ಅವರು ಬೆಂಗಳೂರು ಲಾಲ್ ಬಾಗ್ ನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ
ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯಾಧಾರಿತ ಗಣರಾಜ್ಯೋತ್ಸವ 217ನೇ ಫಲ ಪುಷ್ಪ ಪ್ರದರ್ಶನದಲ್ಲಿ ಜನವರಿ 24ರಂದು ನಡೆದ ವಿವಿಧ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ಹಿರಿಯೂರಿನ ರಂಗನಾಥ ಸ್ಟುಡಿಯೋ ಮಾಲೀಕ ಪಾರ್ಥಸಾರಥಿ ರಾಣಿ ರವರ ಸೊಸೆ ನಂದಿನಿ ದರ್ಶನ್ ಫಲ ಪುಷ್ಪ ಪ್ರದರ್ಶನದಲ್ಲಿ ಬಾಳೆ ಎಲೆಯಲ್ಲಿ ಥಾಯ್ ಆರ್ಟ್ ಎಂಬ ಕಲೆಯಲ್ಲಿ ಗಜ ಚಿತ್ರವನ್ನು ಅದ್ಭುತವಾಗಿ ರಚಿಸಿದ್ದು ಆ ಚಿತ್ರಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.