ವರ್ಷ ಕಳೆದರು ದೊರಕದ ಇ-ಖಾತಾ ಕಾಂಗ್ರೆಸ್ ಮುಖಂಡ ಧರಣಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ಕಾರ ಈ ಖಾತೆ ಮಾಡಿಸಿಕೊಳ್ಳಿ ಎಂದು ಪದೇಪದೇ ಹೇಳುತ್ತಿದೆ
, ಆದರೆ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರೆ ಸರ್ವರ್ ಡೌನ್ ಅಥವಾ ದಾಖಲೆ ಕೊಡಿ ಎಂದು ಇಲ್ಲಸಲ್ಲದ ಕಾರಣ ಹೇಳಿ ದಿನಗಳು ಮುಂದಕ್ಕೆ ಆಗುತ್ತಿದ್ದಾರೆ.

ಹೌದು ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಗ್ರಾಮ ಪಂಚಾಯಿತಿ ಮುಂದೆ ಒಂದು ವರ್ಷ ಕಳೆದರೂ ಸಹ ಈ ಖಾತೆ ಮಾಡಿಲ್ಲ ಎಂದು ಕಾರನಾಳ ಗ್ರಾಮದ ಕಾಂಗ್ರೆಸ್ ಮುಖಂಡ ಮಹೇಶ್ ಎಂಬುವರು ಪಂಚಾಯಿತಿಯ ಮುಂದೆ ಕೂತು ನನಗೆ ನ್ಯಾಯ ಬೇಕು ಎಂದು ಧರಣಿ ನಡೆಸಿ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರನಾಳ ಗ್ರಾಮದಲ್ಲಿರುವ 50*106 ವಿಸ್ತೀರ್ಣದ ಜಾಗವನ್ನು ಈ ಖಾತೆ ಮಾಡುವಂತೆ ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಟ್ಟರು ಸಹ ಒಂದು ವರ್ಷವಾದರೂ ಈ ಖಾತೆ ಮಾಡುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

Share This Article
error: Content is protected !!
";