ನವೋದಯ ಪ್ರವೇಶಕ್ಕೆ ಅರ್ಜಿ ಆಹ್ವಾನ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 9 ಮತ್ತು 11ನೇ ತರಗತಿ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಸುವ ಅವಧಿಯನ್ನು ಆಡಳಿತಾತ್ಮ ಕಾರಣಗಳಿಂದ .9 ವರೆಗೆ ವಿಸ್ತರಿಸಲಾಗಿದೆ.

9ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು 8 ತರಗತಿಯಲ್ಲಿ ಓದುತ್ತಿದ್ದು, 2010 ಮೇ 01 ರಿಂದ 2012 ಜುಲೈ 31 ಓಳಗೆ ಜನಿಸಿರಬೇಕು. 11 ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಓದುತ್ತಿದ್ದು, 2008 ಜೂನ್ 1 ರಿಂದ 2010 ಜುಲೈ 31 ನಡುವೆ ಜನಿಸಿರಬೇಕು. ಅಭ್ಯರ್ಥಿಗಳು ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು.

ವೆಬ್ಸೈಟ್  https://cbsietms.nic.in/2024/nvsix/restrationclassIX/registrationclassIX ಹಾಗೂ  https://cbsietms.nic.in/2024/nvsix/restrationclassXI/registrationclassXI ನಲ್ಲಿ ಅರ್ಜಿ ಸಲ್ಲಸಬಹುದು. ಆಯ್ಕೆ ಪರೀಕ್ಷೆಯ ವಸ್ತು ವಿಷಯ, ಮಾನದಂಡಗಳಿಗೆ ನವೋದಯ ವಿದ್ಯಾಲಯ ಸಮಿತಿ ಅಧಿಸೂಚನೆಯನ್ನು ವೀಕ್ಷಿಸುವಂತೆ ಪ್ರಾಚಾರ್ಯ ಡೇನಿಯಲ್ ರತನ್ಕುಮಾರ್ ತಿಳಿಸಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";