ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಜಾತ್ರೆಯಲಿ ಕಂಡದ್ದು….!
ಪರಿಷೆಯಲಿ
ಎದುರಾದ ಮೊನಾಲಿಸಾರು
ಮೊನ್ನೆ ಕುಂಭಮೇಳದಿ ಕಂಡ
ಅವಳಷ್ಟು ಸುಂದರಿಯರೇನಲ್ಲ.
ಜವಾಬ್ದಾರಿಯ ಹೆಗಲಿಗೆ ದಾರದಿಂದೊಲಿದ
ಸಂಸಾರದ ನೊಗ,
ತಲೆಯ ಮೇಲಿನ ಸಂಪಾದನೆಯ ಭಾರ
ಬೆನ್ನಿಗೆ ನೇತು ಬಿದ್ದ ಕರುಳಿನ ಕನಿಕರ,……!
ಜಾತ್ರೆಯಲಿ
ಸಂತೆಯಲಿ
ಓಣಿಯಲಿ
ದುಡಿದುಣ್ಣುವ ಖಾತ್ರಿಯಲಿ ಸಬಲೆಯರು…!
ಸಿಂದೊಳ್ಳು ದುರುಗಣ್ಣನ ಝೀರ್ ಬುರ್
ಜಾತ್ರೆಯ ಸಡಗರದ ಮತ್ತು ರಂಗೇರಿ
ಮೀಸೆ ಉರಿ ಮಾಡಲು
ಒಡಲಾಳದ ಹಸಿವು, ಭವಣೆ
ಪೌಳಿಯ ಮುಂದೆ ಕೈಚಾಚಿ ನಿಂತಿವೆ !
ಕಾನೂನಿನ ಕುಣಿಕೆಗೆ ಸಿಕ್ಕ ಭಂಗಿಯ ಚಿಲುಮೆ
ತುಕ್ಕು ಹಿಡಿದು ತುಂಬೆಯೊಳಗಿನ ತಂಬಾಕು
ಸುರುಳಿ ಸುತ್ತಿ ಹೊಗೆಯಾಗಿದೆ
ಸಾಧುಗಳ ಕಮಂಡಲ ಗಂಗೆ
ಸುರೆಯಾಗಿ ನಶೆಯಾಗಿದೆ.!!
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು