ಸುಳ್ಳು ಸುದ್ದಿ ತಡೆ, ದ್ವೇಷ ಭಾಷಣ ತಡೆಗೆ ಹೊಸ ಕಾನೂನು ಜಾರಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳು ಸೇರಿದಂತೆ ಇತರ ವೇದಿಕೆಗಳಲ್ಲಿ ಸುಳ್ಳು ಸುದ್ದಿ
, ದ್ವೇಷ ಭಾಷಣ ತಡೆಗೆ ಹೊಸ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ ನಿಯಂತ್ರಣ) ವಿಧೇಯಕ 2025ರಡಿ ಇಂತಹ ಅಪರಾಧ ಮಾಡಿದವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸುವ ಮಹತ್ವದ ಕಾಯ್ದೆ ಇದಾಗಿದೆ. ಉದ್ದೇಶಿತ ಮಸೂದೆಯು ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳನ್ನು ಜಾಮೀನು ರಹಿತ ಮತ್ತು ಅರಿಯಲಾಗದ ಅಪರಾಧಗಳೆಂದು ವರ್ಗೀಕರಿಸುತ್ತದೆ.

- Advertisement - 

ದ್ವೇಷ ಭಾಷಣ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷಣೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾಗ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ದಂಡದ ಜೊತೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ.

 ಹೊಸ ಮಸೂದೆಯಲ್ಲಿ ಸಾಮಾಜಿಕ ಜಾಲತಾಣಗಳು, ಮಾಧ್ಯಮ ಕಂಪನಿಗಳು, ಸರ್ಚ್ ಇಂಜಿನ್‌ಗಳು, ಟೆಲಿಕಾಂ ಆಪರೇಟರ್‌ಗಳು, ಆನ್‌ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಂತಹ ಡಿಜಿಟಲ್ ಮಧ್ಯವರ್ತಿಗಳು ಪೋಸ್ಟ್ ಮಾಡುವ ವಿಷಯಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಹೇಳಲಾಗಿದೆ.
ಈ ಪ್ಲಾಟ್‌ಫಾರ್ಮ್‌ಗಳು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಪಾವತಿಸಬೇಕಾಗುತ್ತದೆ. ದ್ವೇಷದ ಭಾಷಣ ಫೋಸ್ಟ್ ಮಾಡಲು ಹಣಕಾಸಿನ ಬೆಂಬಲ ಒದಗಿಸುವವರು
, ಅಂತಹ ವೇದಿಕೆಗಳಿಗೆ ಸಹಾಯ ಮಾಡುವ ವ್ಯಕ್ತಿಗಳು ಕೂಡಾ ಪ್ರಾಥಮಿಕ ಅಪರಾಧಿಗಳಂತೆಯೇ ದಂಡ ನೀಡಬೇಕಾಗುತ್ತದೆ.

- Advertisement - 

ಅಪಾಯವಿರುವ ಪ್ರದೇಶಗಳಲ್ಲಿ ಕೋಮು ಗಲಭೆಯ ಪ್ರಚೋದನಾಕಾರಿ ಹೇಳಿಕೆ ತಡೆಗಟ್ಟುವ ಆದೇಶಗಳನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು. ಈ ಆದೇಶಗಳು ಸಭೆಗಳು, ಮೆರವಣಿಗೆಗಳು, ಧ್ವನಿ ವರ್ಧಕಗಳ ಬಳಕೆ ಅಥವಾ ಭಯವನ್ನು ಪ್ರಚೋದಿಸುವ ಯಾವುದೇ ಕ್ರಿಯೆಯನ್ನು ನಿಷೇಧಿಸಬಹುದು. ಅಂತಹ ನಿರ್ಬಂಧಗಳನ್ನು ಆರಂಭದಲ್ಲಿ 30 ದಿನಗಳವರೆಗೆ ವಿಧಿಸಬಹುದು, ಅವಶ್ಯಕತೆಯ ಆಧಾರದ ಮೇಲೆ 60 ದಿನಗಳವರೆಗೆ ವಿಸ್ತರಿಸಬಹುದು.

ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಮಸೂದೆಯು ಜಾಗೃತಿ ಅಭಿಯಾನಗಳು, ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳಿಗೆ ಕರೆ ನೀಡಲಾಗಿದೆ. ಇದರ ಹೊಣೆಗಾರಿಕೆಯನ್ನು ಮಾನವ ಹಕ್ಕುಗಳ ಆಯೋಗ ಅಥವಾ ಮಹಿಳಾ ಆಯೋಗದಂತಹ ರಾಜ್ಯ ಆಯೋಗಗಳಿಗೆ ನಿಯೋಜಿಸಬಹುದು.

ಮಸೂದೆಯಡಿ ಉತ್ತಮ ನಂಬಿಕೆಯಿಂದ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಕಾನೂನು ಕ್ರಮದಿಂದ ರಕ್ಷಿಸಲ್ಪಡುತ್ತಾರೆ. ರಾಜ್ಯ ಶಾಸಕಾಂಗದ ಮೇಲ್ವಿಚಾರಣೆಯೊಂದಿಗೆ ಶಾಸನ ಜಾರಿಗೊಳಿಸಲು ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವನ್ನು ಈ ವಿಧೇಯಕ ನೀಡುತ್ತದೆ.

Share This Article
error: Content is protected !!
";