ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ತೂಬಗೆರೆ ಬಾಗದ ಹಲಸಿನ ಕಾಯಿ ಬೆಳೆ ಹೆಸರುವಾಸಿಯಾಗಿದೆ. ಇದಕ್ಕೆ ರಾಜ್ಯಾದ್ಯಂತ ಬಹಳಷ್ಠು ಬೇಡಿಕೆ ಇದ್ದು ಅದರೆ ಸೂಕ್ತ ಮಾರುಕಟ್ಟೆ ಇಲ್ಲದೆ ಹಲಸು ಬೆಳೆಗಾರರು ಪರದಾಡುವಂತಾಗಿದೆ.
ತಾಲ್ಲೂಕಿನ ತೂಬಗೆರೆ ಹೋಬಳಿ ಸುತ್ತಮುತ್ತಲಿನ ಬಾಗದ ಕಾಚಹಳ್ಳಿ, ಕೊಂಡಸಂದ್ರ, ನೆಲ್ಲುಗುದಿಗೆ, ದುರ್ಗೇನಹಳ್ಳಿ, ಐಯ್ಯಮ್ಮನಹಳ್ಳಿ,ಮುದ್ದೇನಹಳ್ಳಿ ಈ ಪ್ರದೇಶದಲ್ಲಿ ಬೆಳೆಯುವ ಹಲಸಿನ ಹಣ್ಣು ಉತ್ತಮ ರೀತಿಯ ಹಾಗು ಬಗೆ ಬಗೆಯ ಹಣ್ಣು ಸಿಗುತ್ತವೆ.
ದೊಡ್ಡಬಳ್ಳಾಪುರ ದಲ್ಲಿನ ಹಲಸು ವ್ಯಾಪಾರಕ್ಕೆ ಹಾಗು ಬೆಳೆಗಾರರ ಹಲಸು ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡುವ ಉದ್ದೇಶದಿಂದ ದೊಡ್ಡಬಳ್ಳಾಪುರದಲ್ಲಿ ಹಲಸಿನ ಮೇಳ ಆಯೋಜಿಸಬೇಕೆಂದು ಮನವಿ ರೈತರು ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಇದೇ ತಿಂಗಳು 7ನೇ ತಾರೀಕು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಮೇಳ ಆಯೋಜಿಸುವಂತೆ ಹಾಗು ಅದಕ್ಕೆ ಅವಶ್ಯಕತೆ ಇರುವ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ಡಿ ಡಿ ಗುಣವಂತರವರಿಗೆ ತಿಳಿಸಿದರು.
ಮುಂದಿನ ದಿನಗಳಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿಯೂ ಹಲಸಿನ ಮೇಳ ಆಯೋಜಿಸಲು ಸೂಕ್ತ ಸ್ಥಳ ಗುರುತಿಸುವಂತೆ ನಗರಸಭೆ ಆಯುಕ್ತರಿಗೆ ತಿಳಿಸಿದರು. ವ್ಯಾಪಾರಸ್ಥರಿಗೆ ಸಧ್ಯ ಎ ಪಿ ಎಂ ಸಿ ಬಳಿ ವ್ಯಾಪಾರ ಮಾಡಲು ಸ್ಥಳವಾಕಾಶ ಮಾಡಿ ಕೊಡುವಂತೆ ಎ ಪಿ ಎಂ ಸಿ ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ವಡ್ಡರಹಳ್ಳಿ ರವಿಕುಮಾರ್ ಐಟಿ ಉದ್ಯೋಗಿ ರಾಜಶೇಖರ ಹಾಗು ಹಲಸು ವ್ಯಾಪಾರಸ್ಥರು ಹಾಜರಿದ್ದರು.