ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ವಿಜಯನಗರ ಮಾ.4 ಹತ್ತಿರದ ಶಿವಪುರ ನಿವಾಸಿಯಾದ ಶ್ರೀಮತಿ ಅನ್ನಪೂರ್ಣ ಕುಂಭಮೇಳದಲ್ಲಿ ಭಾಗವಹಿಸುವ ತನ್ನ ತಂದೆ ಎಲ್ಲಪ್ಪ ಸಿದ್ದಾರ್ (70 )ತಾಯಿ ಪಾರ್ವತಮ್ಮ ಸಿದ್ದಾರ್(65) ಹಾಗೂ ತಂದೆಯ ಸಹೋದರಿ ಮಲ್ಲಮ್ಮ (65) ಆಸೆ ಪೂರೈಸುವ ಕೆಲಸಕ್ಕೆ ಕೈಗೂಡಲು
ಒಂಟಿಯಾಗಿ 18000 ಕಿಲೋಮೀಟರ್ ದೂರದ ಪ್ರಯಾರಾಜ್ ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ಥಾನವನ್ನು ಮಾಡಿಸಿ ಅವರ ಆಸೆಯನ್ನು ಪೂರೈಸಿದಳು ಹಾಗೂ ಇವರನ್ನು ಕ್ಷೇಮವಾಗಿ ಮನೆಗೆ ತಲುಪಿಸಿರುತ್ತಾರೆ ತನ್ನ ತಂದೆ ತಾಯಿ ಆಸೆಯನ್ನು
ಪೂರೈಸಲು ಒಂಟಿಯಾಗಿ ತಾನೇ ಕಾರು ಚಾಲನೆ ಮಾಡಿಕೊಂಡು ದೂರದ ಪ್ರಯಾಗ್ರಾಜ್ಗೆ ಪ್ರಯಾಣಿಸಲು ಸಾಹಸ ಮಾಡಿರುವ ಅನ್ನಪೂರ್ಣ ಇವರ ಸಾಧನೆಯನ್ನು ಕುಟುಂಬದವರು ಸ್ನೇಹಿತರು ಹಾಗು ಇಡೀ ಜಿಲ್ಲೆಯವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

