ಬೆಂಗಳೂರು ನಗರ, ಬೆಂ. ಗ್ರಾ., ತುಮಕೂರು ಜಿಲ್ಲೆಗಳ ವ್ಯಾಪ್ತಿಯ ಕೆರೆಗಳಿಗೆ ನೀರು ಭರ್ತಿ ಯೋಜನೆಗೆ ಶಂಕುಸ್ಥಾಪನೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ
263 ಎಂಎಲ್‌ಡಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿರುವ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನೆಲಮಂಗಲದಲ್ಲಿ ಭೂಮಿಪೂಜೆ ನೆರವೇರಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿದರು.

ಕಾಂಗ್ರೆಸ್‌ಮೇಲೆ ವಿಶ್ವಾಸವಿಟ್ಟು ಜಿಲ್ಲೆಯಲ್ಲಿ ಮೂವರು ಶಾಸಕರನ್ನು ಗೆಲ್ಲಿಸಿದ್ದೀರಿ. ಅಧಿಕಾರ ನಶ್ವರ, ಕಳೆದ ಎರಡು ವರ್ಷದಲ್ಲಿ ಕಾಂಗ್ರೆಸ್‌ಸರ್ಕಾರದ ಸಾಧನೆ ಅಜರಾಮರ. ರೈತರ ಬದುಕನ್ನು ಹಸನು ಮಾಡುವುದು ನಮ್ಮ ಸರ್ಕಾರದ ಧ್ಯೇಯ. ಟೀಕೆಗಳನ್ನು ಮಾಡುವವರು ಮಾಡುತ್ತಿರಲಿ, ನಮಗೆ ಯಶಸ್ಸು ಮುಖ್ಯ ಎಂದು ಡಿಸಿಎಂ ಹೇಳಿದರು.

 ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿಸುವ ಕಾರ್ಯ ನಡೆಯುತ್ತಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಅನ್ನದಾತರ ಬದುಕಿಗೆ ಶಕ್ತಿ ತುಂಬುವುದು ಈ ಯೋಜನೆಯ ಉದ್ದೇಶ. ನಮ್ಮ ಸರ್ಕಾರ ಸದಾ ಜನಸಾಮಾನ್ಯರ ಹಿತ ಕಾಪಾಡಲಿದೆ ಎಂದು ಡಿಕೆಶಿ ತಿಳಿಸಿದರು.

ವೃಷಭಾವತಿ ಏತ ನೀರಾವರಿ ಯೋಜನೆಯ ಮೂಲಕ ನೆಲಮಂಗಲ ತಾಲೂಕಿನ 69 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಕಸಬಾ ಹೋಬಳಿಯ ಕಳ್ಳೇಗೌಡನಹಳ್ಳಿ ಕೆರೆ ಪ್ರದೇಶದಲ್ಲಿ ಭೂಮಿಪೂಜೆ ನೆರವೇರಿಸಿದೆ ಎಂದು ಅವರು ತಿಳಿಸಿದರು.

 ಎರಡು ಹಂತದಲ್ಲಿ ನೀರನ್ನು ಶುದ್ಧೀಕರಣಗೊಳಿಸಿ, ಜನಬಳಕೆಗೆ ಪೂರೈಸಲಾಗುವುದು. ವೃಷಭಾವತಿಯ‌ನೀರು ಇನ್ನು ನೆಲಮಂಗಲದ ರೈತರಿಗೆ ನೀರುಣಿಸಿ, ಸಮೃದ್ಧಿಯನ್ನು ಹೆಚ್ಚಿಸಲಿದೆ.

 

Share This Article
error: Content is protected !!
";