ನಂದಿ ಗಿರಿಧಾಮದಲ್ಲಿ ಫಿಕ್ಸ್ ಆಗಿದ್ದ ಸಂಪುಟ ಸಭೆ ಬೆಂಗಳೂರಿಗೆ ಶಿಫ್ಟ್

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಜೂ.19 ರಂದು ಗುರುವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ದಿಢೀರ್ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

- Advertisement - 

ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಸಚಿವ ಸಂಪುಟದ 13ನೇ ಸಭೆ ನಡೆಸಲು ಸರ್ಕಾರ ತಿರ್ಮಾನ ಮಾಡಿತ್ತು. ಸಚಿವ ಸಂಪುಟ ಸಭೆಗೆ ನಂದಿಗಿರಿಧಾಮ ಸಿದ್ಧಗೊಂಡಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮಾಡಲಾಗಿತ್ತು.

- Advertisement - 

ಸಚಿವ ಸಂಪುಟ ಸಭೆ ನಡೆಸಲು ಮಯೂರ ಪೈನ್ ಟಾಪ್ ಹಾಲ್ ಆಧುನೀಕರಣಗೊಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ನಂದಿಗಿರಿಧಾಮದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಬೆಂಗಳೂರಿನ ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ.

ಸಚಿವ ಸಂಪುಟ ಸಭೆ ನಡೆಯುವ ಕಾರಣಕ್ಕೆ ಇಂದಿನಿಂದ ಎರಡು ದಿನ ನಂಗಿರಿಧಾಮಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು. ಬೆಟ್ಟದಲ್ಲಿನ ರೂಮ್​ಗಳನ್ನು ಬಾಡಿಗೆ ಕೊಡುವುದಕ್ಕೂ ಜಿಲ್ಲಾಡಳಿತ ನಿರ್ಬಂಧಿಸಲಾಗಿತ್ತು.

- Advertisement - 

 

Share This Article
error: Content is protected !!
";