ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದ ಹೊರ ಭಾಗದಲ್ಲಿ ಕಾಡ್ಗಿಚ್ಚು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರು ತಾಲೂಕಿನ ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದ ಹೊರ ಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಎಮ್ರಹಳ್ಳಿ
, ಹೊಸಖಾನ್ ಸುತ್ತಮುತ್ತಲಿನ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು, ಒಣಗಿದ ತರಗೆಲೆಗಳಿಂದ ಕ್ಷಣಾರ್ಧದಲ್ಲಿ ಕಿ.ಮೀ.ಗಳಷ್ಟು ದೂರ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.

ಬೆಂಕಿ ನಂದಿಸುವ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದುವರೆಸಿದ್ದು ವಾಚರ್‌ಗಳ ಕೊರತೆ ಬೆಂಕಿ ನಿಯಂತ್ರಣಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಧಿಕಾರಿಗಳು ಕೆಲವೆಡೆ ಫೈರ್​​ಲೈನ್ ಮಾಡಿಲ್ಲವೆಂದು ಪರಿಸರವಾದಿಗಳು ದೂರುತಿದ್ದು
, ಅಪಾರ ಪ್ರಮಾಣದಲ್ಲಿ ಅಪರೂಪದ ಸಸ್ಯ ಸಂಪತ್ತು ಹಾನಿಯಾಗುತ್ತಿದೆ. ಬೆಂಕಿಯಿಂದ ಅಭಯಾರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳ ಜೀವಕ್ಕೂ ಸಂಚಕಾರ ಎದುರಾಗಿದೆ.

- Advertisement - 

ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದು, ಭದ್ರಾ, ಮುತ್ತೋಡಿ ಅರಣ್ಯಕ್ಕೆ ಕಾಡ್ಗಿಚ್ಚಿನಿಂದ ಹಾನಿ ಆಗಿಲ್ಲ, ಅರಣ್ಯಕ್ಕೆ ಬೆಂಕಿ ಹಚ್ಚಿದವರ ಪತ್ತೆಗೆ ಡ್ರೋನ್, ಶ್ವಾನ ದಳ ಬಳಕೆ ಮಾಡಲಾಗುತ್ತಿತ್ತು. ಈ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಭದ್ರಾ ವಲಯದ ಮುತ್ತೋಡಿಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ನಾಶ, ವನ್ಯಜೀವಿ ಹಾನಿ ಆಗಿರುವುದಿಲ್ಲ ಎಂದು ಭದ್ರಾ ಅಭಯಾರಣ್ಯದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೋಡಿಗೆ ಹೊಂದಿಕೊಂಡಿರುವ ಶಿರವಾಸೆ ಸರ್ವೆ ನಂಬರ್ 198 ಮತ್ತು 226ರ ಪಾಳು ಬಿದ್ದ ಹಿಡುವಳಿ ಜಮೀನಿನಲ್ಲಿ ಬೆಳೆದಿದ್ದ ಗಿಡಗಂಟಿ, ಹುಲ್ಲಿಗೆ ಉದ್ದೇಶ ಪೂರ್ವಕವಾಗಿ ಯಾರೋ ಬೆಂಕಿ ಇಟ್ಟಿದ್ದು, ಈ ಬೆಂಕಿ ಅರಣ್ಯ ಪ್ರದೇಶದ ಕೆಲ ಭಾಗಕ್ಕೆ ಹಾನಿ ಉಂಟು ಮಾಡಿದೆ. ಕೂಡಲೇ ಪ್ರಾದೇಶಿಕ ವಿಭಾಗ ಮತ್ತು ವನ್ಯಜೀವಿ ವಿಭಾಗದ ಸಿಬ್ಬಂದಿ ಜೊತೆಗೂಡಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

- Advertisement - 

ಕಾಡಿನ ಸಮೀಪ ಬೆಂಕಿ ಹಚ್ಚಿದವರ ಪತ್ತೆಗೆ ಶ್ವಾನದಳ, ಥರ್ಮಲ್ ಡ್ರೋನ್, ಬಾಹ್ಯಾಕಾಶ ಚಿತ್ರಗಳನ್ನು ಬಳಸಲಾಗುತ್ತಿದ್ದು, ತನಿಖೆ ಚುರುಕುಗೊಂಡಿದೆ. ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸಲು ಕ್ರಮ ವಹಿಸಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಪುಲಕಿತ್ ಮೀನಾ ಈಟಿವಿ ಭಾರತಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಮುತ್ತೋಡಿ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು, ಭದ್ರಾ ಅಭಯಾರಣ್ಯದ ಅಪಾರ ಸಸ್ಯ ಸಂಪತ್ತು ನಾಶ: ಬೆಂಕಿ ರೇಖೆ ಸಮರ್ಪಕವಾಗಿ ಮಾಡಿರಲಿಲ್ಲ, ಸಿಬ್ಬಂದಿ ಕೊರತೆಯಿಂದ ಭಾರೀ ಹಾನಿ ಎಂಬ ವರದಿಗಳು ನಿರಾಧಾರವಾಗಿದ್ದು, ಮುತ್ತೋಡಿ ಭದ್ರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲೂ ಬೆಂಕಿ ರೇಖೆಯನ್ನು ನಿರ್ಮಾಣ ಮಾಡಿದ್ದು, ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಅರಣ್ಯಕ್ಕೆ ಬೆಂಕಿ ಹಚ್ಚುವವರನ್ನು ಪತ್ತೆಹಚ್ಚಲು ದೈನಂದಿನ ಗಸ್ತು ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಕೆಲವು ಜನರಲ್ಲಿ ಮೂಢನಂಬಿಕೆ ಇದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ, ಬೆಂಕಿ ಹಚ್ಚದಂತೆ ಜಾಗೃತಿ ಮೂಡಿಸಲಾಗಿರುತ್ತದೆ. ಅರಣ್ಯದೊಳಗೆ ಸಂಚರಿಸುವವರಿಂದಲೂ ಕಾಡಿಗೆ ಬೆಂಕಿ ಬೀಳದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

 

Share This Article
error: Content is protected !!
";