ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಕ್ಷಿಣ ಭಾರತದ ಸುಪ್ರಸಿದ್ದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ವತಿಯಿಂದ ದನಗಳ ಜಾತ್ರೆಯ ಪೂರ್ವ ಸಿದ್ದತೆಗೆ ಸಭೆ ನಡೆಸಲಾಯಿತು.
ಸಭೆಯಲ್ಲಿ ಘಾಟಿ ಸುಬ್ರಹ್ಮಣ್ಯದಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತದೆ. ಇದು ರಾಸುಗಳ ವ್ಯಾಪಾರ ಮತ್ತು ವಹಿವಾಟಿಗೆ ಪ್ರಸಿದ್ಧವಾಗಿದೆ. ಈ ಜಾತ್ರೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದಲೂ ರೈತರು ಭಾಗವಹಿಸುತ್ತಾರೆ. ಇಲ್ಲಿನ ವಿವಿಧ ತಳಿಗಳ ಎತ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಬರುತ್ತಾರೆ. ಈ ಜಾತ್ರೆಗೆ ರೈತರು ತಮ್ಮ ರಾಸುಗಳನ್ನು ಮೆರವಣಿಗೆಯೊಂದಿಗೆ ಕರೆತರುವುದು ಇಲ್ಲಿನ ವಿಶೇಷ ಸಂಪ್ರದಾಯವಾಗಿದೆ.
ಘಾಟಿ ಸುಬ್ರಹ್ಮಣ್ಯ ದೇವಾಲಯದ ಸನ್ನಿಧಿಯಲ್ಲಿ ನಡೆಯುವ ಜಾತ್ರೆ ಯಲ್ಲಿ ನಮ್ಮ ರಾಜ್ಯ ಹಾಗೂ ಅಂತರ್ ರಾಜ್ಯದ ವ್ಯಾಪಾರಗಾರರಿಗೆ ದನಗಳನ್ನು ಸಾಕಾಣಿಕೆ ಸುಂಕ ದೇವಾಲಯದ ಅಭಿವೃದ್ದಿ ಪ್ರಾಧಿಕಾರದಿಂದ ವಾಹನ ಸುಂಕ ವಿನಾಯಿತಿ ನೀಡಲಾಗಿತ್ತು.
ಅದೆ ರೀತಿ ದೇವಾಲಯದ ಅಭಿವೃದ್ದಿ ಪ್ರಾಧಿಕಾರದಿಂದ ಈ ಬಾರಿಯು ವಿನಾಯಿತಿ ನೀಡಿದರೆ ಸಾಕಾಣಿಕಾರರು ಹಾಗೂ ರಾಸು ವ್ಯಾಪಾರಸ್ಥರು ಬಹಳ ಉಪಯೋಗ ಪಡೆದುಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ದೇವಾಲಯದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ರೈತರಿಗೆ ಹಾಗು ವ್ಯಾಪಾರಸ್ಥರಿಗೆ ವ್ಯವಸ್ಥೆ ಕಲ್ಪಿಸುವ ವಿಷಯಗಳು-
1 ಘಾಟಿ ಸುಬ್ರಹ್ಮಣ್ಯ ಅಂತರ್ ರಾಜ್ಯ ಭಾರಿ ದನಗಳ ಜಾತ್ರೆಗೆ ದನಗಳನ್ನು ಸಾಗಿಸುವ ವಾಹನಗಳಿಗೆ ವಾಹನ ಸುಂಕ ವಿನಾಯಿತಿ, ಕಾಂಪೌಂಡ್ ತೆರೆಯುವ ಬಗ್ಗೆ
3 . ರೈತರಿಗೆ ವಿಶ್ರಾಂತಿ ಕೊಠಡಿಗಳು
4 . ರಾತ್ರಿ ಸಮಯದಲ್ಲಿ ರೈತರಿಗೆ ಊಟ ವ್ಯವಸ್ಥೆ.. ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರು ಪ್ರಸನ್ನ ಕುಮಾರ್, ತಾಲೂಕು ಅಧ್ಯಕ್ಷರು ಹನುಮೇಗೌಡ, ತಾಲೂಕು ಕಾರ್ಯದರ್ಶಿ ಸತೀಶ್, ಮುನಿ ರಾಮೇಗೌಡ, ವಾಸುದೇವ್, ಮೂರ್ತಿ, ಮುರಳಿ, ಹನುಮಂತರಾಯಪ್ಪ, ಹಳ್ಳಿ ರೈತ ಅಂಬರೀಶ್, ತಿಪ್ಪೂರು ತಿಮ್ಮಣ್ಣ, ಇನ್ನು ಅನೇಕ ರೈತ ಮುಖಂಡರುಸಭೆಯಲ್ಲಿ ಭಾಗವಹಿಸಿದ್ದರು.

