ಘಾಟಿ ಸುಬ್ರಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್ ಅಧಿಕಾರ ಸ್ವೀಕಾರ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಶ್ರೀ.ಪಿ. ದಿನೇಶ್ ರವರನ್ನು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಪಿ. ದಿನೇಶ್ ಅಧಿಕಾರ ಸ್ವೀಕಾರ ಮಾಡಿದರು .

- Advertisement - 

ಸರ್ಕಾರದ ಅಧಿಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಆಯುಕ್ತ ರಾದ ಪಿ.ದಿನೇಶ್ ರವರನ್ನು ಸಮೂಹ “ಎ” ಕಿರಿಯ ಶ್ರೇಣಿ ವೃಂದದಿಂದ ಸಮೂಹ “ಎ” ಹಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀಡಿ, ಅದೇ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಮುಂದುವರೆಸಿ ಆದೇಶಿಸಲಾಗಿದೆ.

- Advertisement - 

 ಧಾರ್ಮಿಕ ದತ್ತಿ ಇಲಾಖೆಯಲ್ಲಿ ಖಾಲಿ ಇರುವ ಸಮೂಹ-ಎ ಹಿರಿಯ ಶ್ರೇಣಿ ವೃಂದದ ಕಾರ್ಯದರ್ಶಿಯಾಗಿ  ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ  ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ನೂತನ ಕಾರ್ಯದರ್ಶಿಗಳಿಗೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸದಸ್ಯರು  ಒಳಗೊಂಡಂತೆ ದೇವಾಲಯದ ಸಿಬ್ಬಂದಿ ವರ್ಗ  ಸ್ವಾಗತ ಕೋರಿದರು.

- Advertisement - 

 ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ. ಹೇಮಾವತಿ ರವರು, ಪ್ರಾಧಿಕಾರದ ಉಪಕಾರ್ಯದರ್ಶಿ  ನಾರಾಯಣ ಸ್ವಾಮಿ, ಇಲಾಖೆ ಅಧಿಕಾರಿ  ಬೃಂದಾ ಮತ್ತು ಪ್ರಧಾನ ಅರ್ಚಕರು ಶ್ರೀನಿಧಿದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್ ರಂಗಪ್ಪ, ಕೆ. ಎಸ್ .ರವಿ, ಲಕ್ಷ್ಮ ನಾಯಕ್,ಆರ್. ವಿ ಮಹೇಶ್ ಕುಮಾರ್ಹೇಮಲತಾ ರಮೇಶ್ ದೇವಾಲಯದ ನಂಜಪ್ಪ ಮತ್ತು ದೇವಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.

 

 

 

Share This Article
error: Content is protected !!
";