ಗಾಯಿತ್ರಿ ಮತ್ತು ಇತರೆ ಎಲ್ಲ ಕೆರೆಗಳಿಗೆ ನೀರು ಕೊಡಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಮತ್ತು ಬರ ಪೀಡಿತ ಕಲ್ವಳ್ಳಿ ಭಾಗದ ಜವನಗೊಂಡನಹಳ್ಳಿ ಹೋಬಳಿಯ 06 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 100 ಜನವಸತಿ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ಸುಮಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಗಳಿಗೆ ಮತ್ತು

ಕೆರೆಗಳಿಗೆ ನೀರು ತುಂಬಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜವನಗೊಂಡಹಳ್ಳಿ ಹೋಬಳಿಯ
16 ಕೆರೆಗಳು ಮತ್ತು ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರು ತುಂಬಿಸುವ ಯೋಜನೆಯ ಕಾಮಗಾರಿಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಲಾಗಿತ್ತು. ಈ ಕಾಮಗಾರಿ ಅನುಷ್ಠಾನಕ್ಕೆ ಬೇಕಾಗುವ ನೀರಿನ ಹಂಚಿಕೆ ಬಗ್ಗೆ ಉಪಮುಖ್ಯ ಮಂತ್ರಿಗಳು ಹಾಗೂ

- Advertisement - 

ಜಲಸಂಪನ್ಮೂಲ ಸಚಿವರು ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆಯನ್ನು ಸಹ ನಡೆಸಲಾಗಿದ್ದು, ಉಪಮುಖ್ಯ ಮಂತ್ರಿಗಳು ಸಭೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಈ ಯೋಜನೆಗೆ ಬೇಕಾಗುವ ನೀರಿನ ಹಂಚಿಕೆ ಮಾಡುವ ಬಗ್ಗೆ ಉಪಮುಖ್ಯ ಮಂತ್ರಿಗಳ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಮತ್ತು ಯಾವುದಾದರೂ ಮೂಲದಿಂದ ಹಂಚಿಕೆ ಮಾಡಲೇಬೇಕು ಎಂದು ಡಿಸಿಎಂ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕಳೆದ 06 ತಿಂಗಳುಗಳಿಗೂ ಹೆಚ್ಚು ಕಾಲ ನಿರಂತರವಾಗಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಅಂತಿಮವಾಗಿ ಸಣ್ಣ ನೀರಾವರಿ ಇಲಾಖೆಯವರು

ಈ ಯೋಜನೆಗೆ ಬೇಕಾಗುವ ನೀರಿನ ಪ್ರಮಾಣ 0.307 ಟಿ.ಎಂ.ಸಿ. ನೀರನ್ನು ಜಲಸಂಪನ್ಮೂಲ ಇಲಾಖೆಯಿಂದ ಸರ್ಕಾರದ ಆದೇಶ ಸಂಖ್ಯೆ: ಜಸಂಇ 191 VBYE 2025 ಬೆಂಗಳೂರು ದಿನಾಂಕ: 02.02.2026 ರಲ್ಲಿ ಆದೇಶ ನೀಡಲಾಗಿರುತ್ತದೆ. ಸದರಿ ನೀರಿನ ಹಂಚಿಕೆ ಆದೇಶವನ್ನು ಉಪಮುಖ್ಯ ಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇವರಿಂದ ಸ್ವೀಕರಿಸಿ, ಹಿರಿಯೂರು ತಾಲ್ಲೂಕು ಸಮಸ್ತ ರೈತಬಾಂಧವರ ಪರವಾಗಿ ಅದರಲ್ಲೂ ವಿಶೇಷವಾಗಿ ಜವನಗೊಂಡನಹಳ್ಳಿ ಹೋಬಳಿಯ ಸಮಸ್ತ ಜನತೆ ಪರವಾಗಿ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಚಿವ ಸುಧಾಕರ್ ಸಲ್ಲಿಸಿದರು.

- Advertisement - 

 ಈ ಕಾಮಗಾರಿ ಅನುಷ್ಠಾನದಿಂದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಾದ ಉಡುವಳ್ಳಿ ಕೆರೆ, ಗೌಡನಹಳ್ಳಿ ಕೆರೆ, ಗಾಂಧಿನಗರ ಚಿಕ್ಕಕೆರೆ, ಗಾಂಧಿನಗರ ಕೆರೆ, ಬಗ್ಗನಡು ಕೆರೆ, ವಡ್ಡನಹಳ್ಳಿ ಕೆರೆಮಾವಿನಮಡು ಕೆರೆ, ದಿಂಡಾವರ ಕೆರೆ, ಮಾಳಗೊಂಡನಹಳ್ಳಿ ಕೆರೆ, ವೀರವ್ವ ನಾಗತೀಹಳ್ಳಿ ಕೆರೆ, ಪಿಲಾಲಿ ಕೆರೆ, ಜವನಗೊಂಡನಹಳ್ಳಿ ಕೆರೆ, ಕಾಟನಾಯಕನಹಳ್ಳಿ ಕೆರೆ, ಅರಶಿಣಗುಂಡಿ ಕೆರೆ, ಉಳವಿನಹಾಳ್ ಕೆರೆ, ಯಲ್ಲದಕೆರೆ ಕೆರೆ ಹಾಗೂ ಗಾಯತ್ರಿ ಜಲಾಶಯವನ್ನು ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ವೃದ್ದಿ ಪಡಿಸಬಹುದಾಗಿರುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಅಮೃತೇಶ್ವರಸ್ವಾಮಿ, ಬಾಬು ಮತ್ತಿತರರು ಇದ್ದರು.

 

Share This Article
error: Content is protected !!
";