ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವರು ವರನೂ ಕೊಡಲ್ಲ ಶಾಪನೂ ಕೊಡಲ್ಲ, ಕೇವಲ ಅವಕಾಶ ಮಾತ್ರ ಕೊಡ್ತಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಕೆಂಗೇರಿಯ ಕುಂಬಳಗೋಡಿನ ಖಾಸಗಿ ಹೋಟೆಲ್ನಲ್ಲಿ ನಡೆದ ತಿಬ್ಬಾದೇವಿ ಟೆಂಟ್ ಹೌಸ್‘ನ 25ನೇ ವರ್ಷದ ಬೆಳ್ಳಿ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಿಬ್ಬಾದೇವಿಯವರು ಈ ಅವಕಾಶ ಉಪಯೋಗಿಸಿಕೊಂಡು 25 ವರ್ಷ ಬೆಳೆದು ಬಂದಿದ್ದು, ಇನ್ನಷ್ಟು ಅವರು ಬೆಳೆಯಲಿಯಂದು ಡಿ.ಕೆ ಶಿವಕುಮಾರ್ ಹಾರೈಸಿದರು.